ಚಿತ್ರದುರ್ಗ: ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಸಂಶೋಧನಾ ವಿದ್ಯಾರ್ಥಿ, ಚಿತ್ರದುರ್ಗದ ಸಿ.ಅಭಯ ಪ್ರಕಾಶ್, ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ, ಕ್ರೀಡಾಕೂಟಗಳಲ್ಲಿ ವೈಯಕ್ತಿಕ ಹಾಗೂ ತಂಡಗಳ ಭಾಗವಹಿಸುವಿಕೆಯಲ್ಲಿ ಪೌಷ್ಠಿಕಾಂಶದ ಅರಿವು ಮತ್ತು ಅಭ್ಯಾಸಗಳ ಕುರಿತ ಪ್ರಬಂಧಕ್ಕೆ ಮಂಗಳೂರು ವಿವಿ ಪಿಎಚ್ಡಿ ನೀಡಿದೆ.
ವಿವಿ ದೈಹಿಕ ಶಿಕ್ಷಣ ಉಪ ನಿರ್ದೇಶಕ ಡಾ.ಗೆರಾಲ್ಡ್ ಸಂತೋಷ್ ಡಿಸೋಜ ಮಾರ್ಗದರ್ಶನ ಮಾಡಿದ್ದರು.