More

    ಕುಜ ದೋಷದ ಬಗ್ಗೆ ಗೊತ್ತಿದ್ದರೂ, ಬೇಕಂತಲೇ ನಿರ್ಲಕ್ಷ್ಯ ಮಾಡಿದ್ರಾ ಚಿರು!?

    2018ರ ಮೇ 2ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಚಿರಂಜೀವಿ ಸರ್ಜಾ ಮತ್ತು ಮೇಘನಾ ಅವರ ವಿವಾಹ ಅದ್ದೂರಿಯಾಗಿ ನಡೆದಿತ್ತು. ಸರ್ಜಾ ಕುಟುಂಬದ ಮದುವೆ ಎಂಬ ಕಾರಣಕ್ಕೆ ಅದ್ದೂರಿತನದಲ್ಲಿ ಯಾವುದೇ ಕೊರತೆ ಕಂಡಿರಲಿಲ್ಲ. ಆದರೆ, ಚಿರು ತಮ್ ಮದುವೆಗೂ ಮುನ್ನ ಪೂಜೆಯೊಂದನ್ನು ಮಾಡಿಸಬೇಕಿತ್ತು. ಅದನ್ನೂ ಕೊನೆಗೂ ಮಾಡಿಸಲೇ ಇಲ್ಲ. ಅಂದಿನ ಅದರ ಪರಿಣಾಮವೇ ಅವರ ಸಾವಿಗೆ ಕಾರಣವಾಗಿರಬಹುದು ಎಂದು ನಟ ಜಗ್ಗೇಶ್​ ಅಂದಿನ ದಿನಗಳನ್ನು ಚಿರು ಸಾವಿನ ನಂತರ ನೆನಪು ಮಾಡಿಕೊಂಡಿದ್ದರು.

    ಇದನ್ನೂ ಓದಿ: ಹಾಲು- ತುಪ್ಪ ಕಾರ್ಯದಲ್ಲಿ ನಿಲ್ಲದ ಮೇಘನಾ ಕಣ್ಣೀರು..

    ಮದುವೆಗೂ ಮುನ್ನ ಅಷ್ಟಮ ಕುಜ ದೋಷ ಇರುವ ಬಗ್ಗೆ ಜಗ್ಗೇಶ್​, ತಮ್ಮ ಆಪ್ತ ಜ್ಯೋತಿಷಿಯೊಬ್ಬರ ಬಳಿ ಇಬ್ಬರ ಜಾತಕ ಇಟ್ಟು ಕೇಳಿಸಿದ್ದರು. ಪೂಜೆ ಮಾಡಿಸಿಯೇ ಮುಂದುವರಿಯುವುದಾಗಿ ಜ್ಯೋತಿಷಿಗಳಿಂದ ಆದೇಶ ಬಂದಿತ್ತು. ಅಷ್ಟರಲ್ಲಾಗಲೇ, ಎರಡೂ ಮನೆಯಲ್ಲಿ ಮದುವೆ ನೆರವೇರಿಸುವುದಕ್ಕೆ ಹಸಿರು ನಿಶಾನೆ ಸಿಕ್ಕಿತ್ತು. ನಿಶ್ಚಿತಾರ್ಥ ಮುಗಿಸಿಕೊಂಡು, ಮೇ 2ರಂದು ಮದುವೆಯೂ ನಡೆದು ಹೋಯಿತು. 

    ಇದನ್ನೂ ಓದಿ: ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ತಾರಕಕ್ಕೇರಿತು ಅರ್ಜುನ್​ ಸರ್ಜಾ ಸಿಟ್ಟು…

    ಮತ್ತೆ ಅಷ್ಟಮ ಕುಜ ದೋಷದ ಪೂಜೆ!? ಅದು ನೆರವೇರಿದೆಯಾ, ಅಥವಾ ಮದುವೆಗೆ ಎಲ್ಲರಿಂದಲೂ ಒಪ್ಪಿಗೆ ಸಿಕ್ಕಮೇಲೆ ಇನ್ನೆಲ್ಲಿಂದ ಪೂಜೆ ಎಂದು ಸ್ವತಃ ಚಿರು ನಿರ್ಲಕ್ಷ್ಯ ಮಾಡಿದರಾ? ಮದುವೆ ಖುಷಿಯಲ್ಲಿ ಆ ಪೂಜೆ ಮಾಡಿಸುವುದನ್ನೇ ಚಿರು ಮರೆತರಾ? ಸದ್ಯಕ್ಕೆ ಈ ಪ್ರಶ್ನೆಗೆ ಉತ್ತರ ಇಲ್ಲ. ಸಾಲು ಸಾಲು ಸಿನಿಮಾಗಳ ಶೂಟಿಂಗ್​, ಒಪ್ಪಿಕೊಂಡ ಸಿನಿಮಾ ಮುಗಿಸಿಕೊಡುವ ಒತ್ತಡವೂ ಅವರಿಗೆ ಎದುರಾಗಿತ್ತಾ? ಹೀಗೆ ಹಲವು ಪ್ರಶ್ನೆಗಳು ಎದುರಾಗುತ್ತಿವೆಯಾದರೂ, ಅದ್ಯಾವುದಕ್ಕೂ ಸ್ಪಷ್ಟ ಉತ್ತರ ಸಿಗುತ್ತಿಲ್ಲ.

    ಲಾಕ್​ಡೌನ್​ ಅವಧಿಯೇ ಚಿರು ಸಾವಿಗೆ ಮುಳುವಾಯ್ತಾ?; ಅದಕ್ಕೆ ಇಲ್ಲಿದೆ ಕಾರಣ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts