More

    ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡುತ್ತಿದ್ದಂತೆಯೇ ವೇದನೆಯೊಂದಿಗೆ ಕುಸಿದ ಚಿರಾಗ್​ ಪಾಸ್ವಾನ್​

    ಪಟನಾ: ಲೋಕ ಜನಶಕ್ತಿ ಪಾರ್ಟಿ (ಎಲ್​ಜೆಪಿ)ಯ ಸಂಸ್ಥಾಪಕ, ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ ಅವರ ಅಂತ್ಯಸಂಸ್ಕಾರ ಇಂದು ಪಟನಾದ ದಿಘಾ ಘಾಟ್​ನಲ್ಲಿ ಸರ್ಕಾರಿ ಗೌರವದೊಂದಿಗೆ ನೆರವೇರಿತು. ಪುತ್ರ ಚಿರಾಗ್​ ಪಾಸ್ವಾನ್​ ಅಪ್ಪನ ಚಿತೆಗೆ ಅಗ್ನಿಸ್ಪರ್ಶ ಮಾಡಿದ ಬೆನ್ನಿಗೆ ​ ಪಿತೃ ವಿಯೋಗದ ವೇದನೆಯೊಂದಿಗೆ ಕುಸಿಯುವ ಸ್ಥಿತಿ ತಲುಪಿದ್ದರು.

    ಚಿರಾಗ್ ಅಬೋಧಾವಸ್ಥೆಗೆ ಜಾರಿದಾಗ ಕುಸಿಯದಂತೆ ತಡೆದ ಅವರ ಸೋದರ ಸಂಬಂಧಿಗಳು, ಅಂತ್ಯಸಂಸ್ಕಾರ ಪೂರ್ಣಗೊಳಿಸುವಲ್ಲಿ ನೆರವಾದರು. ಚಿರಾಗ್​ ಆರೋಗ್ಯವಾಗಿದ್ದಾರೆ. ಮಾನಸಿಕ ಒತ್ತಡ ಫಲವಾಗಿ ಅವರಿಗೆ ಡಿಹೈಡ್ರೇಶನ್ ಆಗಿದೆ. ಕೆಲವು ಗಂಟೆಗಳಲ್ಲಿ ಅವರು ಸುಧಾರಿಸಿಕೊಳ್ಳುತ್ತಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

    ಇದನ್ನೂ ಓದಿPHOTOS: ಕತಾರ್​​ನಲ್ಲಿ ಕರ್ನಾಟಕ ಸಂಘದಿಂದ ರಕ್ತದಾನ ಶಿಬಿರ; ಸತ್ಕಾರ್ಯಕ್ಕೆ ಜತೆಯಾದ ಹಲವು ಸಂಘಗಳು

    ಮೂವತ್ತೇಳು ವರ್ಷದ ಚಿರಾಗ್ ತಂದೆಯನ್ನು ಬಹಳ ಹಚ್ಚಿಕೊಂಡಿದ್ದರು. ಅಷ್ಟೇ ಅಲ್ಲ, ರಾಷ್ಟ್ರಮಟ್ಟದ ಲಾಕ್​ಡೌನ್ ಆಗಿದ್ದಾಗ ತಂದೆಯ ಕೂದಲು ಕತ್ತರಿಸುವ ಕೆಲಸವನ್ನೂ ಮಾಡಿ ದೇಶದ ಗಮನಸೆಳೆದಿದ್ದರು. ತಂದೆಯ ಬಗ್ಗೆ ಅಪಾರ ಪ್ರೀತಿ ಗೌರವ ಹೊಂದಿದ್ದ ಚಿರಾಗ್​, ಇತ್ತೀಚೆಗೆ ಬಿಹಾರ ಚುನಾವಣೆ ಘೋಷಣೆಯಾದ ಬೆನ್ನಿಗೆ ಎನ್​ಡಿಎ ಮೈತ್ರಿಯಿಂದ ಹೊರಬಂದು ಜೆಡಿಯು ವಿರುದ್ಧ ಎಲ್​ಜೆಪಿ ಅಭ್ಯರ್ಥಿಗಳು ಸ್ಪರ್ಧಿಸುವುದಾಗಿ ಘೋಷಿಸಿ ಎಲ್ಲರನ್ನೂ ದಂಗುಬಡಿಸಿದ್ದರು. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಚಿರಾಗ್​, ಒಂಟಿಯಾಗಿ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದರು.

    ಇದನ್ನೂ ಓದಿಎನ್​ಡಿಎಯಿಂದ ಎಲ್​ಜೆಪಿ ಔಟ್: ನಿತೀಶ್ ವಿರುದ್ಧ ತೊಡೆ ತಟ್ಟಿದ ಪಾಸ್ವಾನ್​

    ಇಷ್ಟಾಗ್ಯೂ, ರಾಜಕೀಯ ದ್ವೇಷದ ಹೊರತಾಗಿಯೂ ನಿತೀಶ್ ಕುಮಾರ್ ಇಂದು ರಾಮವಿಲಾಸ್ ಪಾಸ್ವಾನ್ ಅವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು. ರಾಮವಿಲಾಸ್ ಪಾಸ್ವಾನ್ ಅವರು ಅಕ್ಟೋಬರ್ 8ರಂದು ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಅಸ್ತಂಗತರಾಗಿದ್ದರು. (ಏಜೆನ್ಸೀಸ್)

    ಕೇಂದ್ರ ಸಚಿವ ರಾಮ್​ ವಿಲಾಸ್ ಪಾಸ್ವಾನ್ ನಿಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts