More

    ಚಿಂಚೋಳಿ: ಬಗರ್​ ಹುಕ್ಕುಂ ರೈತರಿಗೆ ಸಾಗುವಳಿ ಚೀಟಿ ನೀಡಿ

    ಚಿಂಚೋಳಿ: ಬಗರ್​ ಹುಕ್ಕುಂ ರೈತರಿಗೆ ಸಾಗುವಳಿ ಚೀಟಿ ನೀಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ತಹಸಿಲ್​ ಕಾರ್ಯಾಲಯದ ಮುಂದೆ ಬಹುಜನ ಸಮಾಜ ಪಕ್ಷದಿಂದ ಶನಿವಾರ ಒಂದು ದಿನದ ಸಾಂಕೇತಿಕ ಧರಣಿ ನಡೆಸಲಾಯಿತು.

    ಬಹುಜನ ಸಮಾಜ ಪಕ್ಷದ ತಾಲೂಕು ಅಧ್ಯಕ್ಷ ವೈಜನಾಥ ಮಿತ್ರಾ ಮಾತನಾಡಿ, ಕ್ಷೇತ್ರದಲ್ಲಿ ಪಾರದರ್ಶಕ ಆಡಳಿತ ವ್ಯವಸ್ಥೆ ಕುಸಿದಿದ್ದು, ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಲ್ಲಿ ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ಕೂಡಲೇ ಬಗರ ಹುಕಂ ರೈತರಿಗೆ ಸಾಗುವಳಿ ಚೀಟಿ ನೀಡಬೇಕು. ಡಾ.ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ ರಾಮ ಭವನ ಮಂಜೂರಿಗೊಳಿಸಿ ಕಾಮಗಾರಿ ಪ್ರಾರಂಭಿಸಬೇಕು. ಐನೋಳ್ಳಿ ಗ್ರಾಮದ ಮಧ್ಯಭಾಗದಲ್ಲಿನ ವೈನ್ ಶಾಪ್ ಸ್ಥಳಾಂತರಿಸಬೇಕು. ಕುಂಚಾವರಂ ಹೊಬಳಿ ಕೇಂದ್ರ ಸ್ಥಾನವಾಗಿ ಮಂಜೂರಿಗೊಳಿಸಬೇಕು. ಕುಂಚಾವರಂನಲ್ಲಿ ಬಾಲಕಿಯರ ವಸತಿ ನಿಲಯ ಸ್ಥಾಪಿಸಬೇಕು. ಕುಂಚಾವರಂ ಭಾಗದ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಕಾಲೇಜು ಪ್ರಾರಂಭಿಸಬೇಕು ಎಂಬ ಮುಂತಾದ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಸಿ ತಹಸೀಲ್ದಾರಗೆ ಮನವಿ ಸಲ್ಲಿಸಿದರು.

    ಈ ಹೋರಾಟದಲ್ಲಿ ಗೌತಮ್ ಬೊಮ್ಮನಳ್ಳಿ, ರಘುವೀರ್ ಸೈನಿಕ, ರಮೇಶ ಮಸಾನಿ, ಸೂರ್ಯಕಾಂತ ಬೀರನಳ್ಳಿ, ದೀಲಿಪಕುಮಾರ ಬೊಮ್ಮನಳ್ಳಿ, ಝರಣಪ್ಪ ನಾಟೀಕಾರ, ವಿವೇಕಾನಂದ ಹೊಸಮನಿ, ಎಸ್.ಕೆ.ಮಹಿಬೂಬ ಸೇರಿದಂತೆ ಅನೇಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts