ಕೊಡಗು: ಬೇಸಿಗೆ ರಜೆಯಲ್ಲಿ ಮಕ್ಕಳನ್ನು ಅವರ ಪಾಡಿಗೆ ಅವರನ್ನು ಬಿಟ್ಟುಬಿಟ್ಟರೆ ಅಪಾಯ ಸಾಧ್ಯತೆ ಖಚಿತ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ. ಇಲ್ಲೊಂದು ಮಗು ಮಹಡಿಯಲ್ಲಿ ಆಟವಾಡುತ್ತ ಕೆಳಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದೆ.
ಕೊಡಗು ಜಿಲ್ಲೆ ವೀರಾಜಪೇಟೆಯ ಗೌರಿಕೆರೆಯ ಮುನೀರ್ ಎಂಬವರ ಪುತ್ರ ತಸ್ಲೀನ್ (4) ಮೃತಪಟ್ಟ ಬಾಲಕ. ಈತ ಮನೆಯ ಮಹಡಿಯಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದು ದುರ್ಮರಣಕ್ಕೀಡಾಗಿದ್ದಾನೆ. ವೀರಾಜಪೇಟೆ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.