ರಾಯಚೂರು: ಜಿಲ್ಲೆಯ ಮಸ್ಕಿ ಹಳ್ಳದಲ್ಲಿ ಎರಡು ತಿಂಗಳ ಹಿಂದೆ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಶನಿವಾರ ಪತ್ತೆಯಾಗಿದೆ. ಹಳ್ಳದ ನಾಲೆಯ ಪೊದೆಯಲ್ಲಿ ಶವ ಪತ್ತೆಯಾಗಿದೆ.
ಸೆಪ್ಟೆಂಬರ್ 11 ರಂದು ಚನ್ನಬಸಪ್ಪ ಹೆಸರಿನ ವ್ಯಕ್ತಿ ಹಳ್ಳದಲ್ಲಿ ಬಳಿ ಬಹಿರ್ದೆಸೆ ಮಾಡಲು ಹೋಗಿದ್ದ. ಆ ವೇಳೆ ಆತ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಈ ವಿಚಾರ ತಿಳಿದು ಬಂದಾಕ್ಷಣ ಅಗ್ನಿಶಾಮಕ ದಳದಿಂದ ಶೋಧ ನಡೆಸಲಾಗಿತ್ತು. 15 ದಿನಗಳ ಕಾಲ ಹುಡುಕಾಟ ನಡೆಸಿದರೂ ಆತನ ದೇಹ ಪತ್ತೆಯಾಗಿರಲಿಲ್ಲ. ಇಂದು ಗ್ರಾಮದ ಯುವಕರು ಮೀದು ಹಿಡಿಯಲು ಹೋದಾಗ ಶವ ಪತ್ತೆಯಾಗಿದೆ.
ಇದನ್ನೂ ಓದಿ: ಮುನಿರತ್ನ ಸಂಪುಟಕ್ಕೆ ಸೇರುತ್ತಾರೋ, ಇಲ್ಲವೋ ಎಂಬ ಪ್ರಶ್ನೆಗೆ ಉತ್ತರಿಸಲು ಸಿಎಂ ಮಾತ್ರ ಸಮರ್ಥರು!
ದೇಹವೆಲ್ಲ ಕೊಳೆತು ಮಣ್ಣಾಗಿದ್ದು, ಕೇವಲ ಅಸ್ಥಿಪಂಜರ ಮಾತ್ರವೇ ಉಳಿದುಕೊಂಡಿದೆ. ಅಲ್ಪಸ್ವಲ್ಪ ಬಟ್ಟೆಯೂ ಉಳಿದುಕೊಂಡಿದೆ. ಶವ ಪತ್ತೆಯಾಗಿರುವ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.