ಬೆಂಗಳೂರು: ಇತ್ತೀಚೆಗೆ ದ ರಾ ಬೇಂದ್ರೆ ಜೀವನ ಮೌಲ್ಯಗಳನ್ನಾಧಾರಿತ ಪ್ರಿ ವೆಡ್ಡಿಂಗ್ ಶೂಟ್ ಒಂದರ ಫೋಟೋಗಳು ಸಕತ್ ವೈರಲ್ ಆಗಿದ್ದವು. ಆ ಫೋಟೋಗಳನ್ನು ಸೆರೆ ಹಿಡಿದಿದ್ದ ಫೋಟೋಗ್ರಾಫರ್ ಕೈನಲ್ಲಿ ಇದೀಗ ಮತ್ತೊಂದು ವಿಶೇಷ ಫೋಟೋಶೂಟ್ ನಡೆದಿದೆ. ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಜೀವನದ ಕಿರು ಪರಿಚಯ ಮಾಡಿಕೊಡುವ ಫೋಟೋಶೂಟ್ ಅದಾಗಿದೆ.
ಯುವ ಆರ್ಟ್ ಸ್ಟುಡಿಯೋಸ್ನ ಹರ್ಷದ್ ಉದಯ್ ಕಾಮತ್ ಈ ಫೋಟೋ ಶೂಟ್ ಮಾಡಿದವರು. ಆಜಾದ್ ಅವರಂತೆಯೇ ಕಾಣುತ್ತಿರುವ ಮಾಡೆಲ್ ಹೆಸರು ಶಶಿ ಹಿರೇಮಠ್. ಧಾರವಾಡದ ಕರ್ನಾಟಕ ಕಾಲೇಜ್ ಧಾರವಾಡ್ (ಕೆಸಿಡಿ)ಯಲ್ಲಿ ಫೋಟೋ ಶೂಟ್ ಮಾಡಲಾಗಿದೆ. ದ ರಾ ಬೇಂದ್ರ ಅವರ ಜೀವನ ಮೌಲ್ಯಾಧಾರಿತ ಪ್ರಿ ವೆಡ್ಡಿಂಗ್ ಫೋಟೋಶೂಟ್ನ್ನು ಜನರು ಸ್ವೀಕರಿಸಿದ ರೀತಿ ನೋಡಿ ಇನ್ನಷ್ಟು ಸಮಾಜಮುಖಿ ಫೋಟೋಶೂಟ್ ಮಾಡುವ ಹುಮ್ಮಸ್ಸು ಹುಟ್ಟಿದ್ದು, ಅದೇ ನಿಟ್ಟಿನಲ್ಲಿ ಈ ಶೂಟ್ ಮಾಡಿದ್ದಾಗಿ ಹೇಳುತ್ತಾರೆ ಹರ್ಷದ್.
ಫೋಟೋಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ
ಫೋಟೋಶೂಟ್ ಮಾಡುವುದಕ್ಕೂ ಮೊದಲು ಚಂದ್ರಶೇಖರ್ ಆಜಾದ್ ಜೀವನದ ಬಗ್ಗೆ ಹೆಚ್ಚು ಅಧ್ಯಯನ ಮಾಡಿದ್ದೇವೆ. ಅವರ ಉಡುಗೆ, ಅವರ ನಿಲುವು ಹೀಗೆ ಸಣ್ಣ ಸಣ್ಣ ಸೂಕ್ಷ್ಮ ವಿಚಾರಗಳನ್ನೂ ಅರಿತುಕೊಂಡ ಮೇಲೆ ಫೋಟೋ ಶೂಟ್ ಮಾಡಲಾಗಿದೆ. ಚಂದ್ರಶೇಖರ್ ಆಜಾದ್ರಂತಹ ವೀರರು ನಮ್ಮ ದೇಶದಲ್ಲಿ ಮಾತ್ರ ಹುಟ್ಟುವುದಕ್ಕೆ ಸಾಧ್ಯ. ಈಗಿನ ಸಮಾಜಕ್ಕೆ ಇಂತಹ ಸ್ವಾತಂತ್ರ್ಯ ಹೋರಾಟಗಾರ ಬಗ್ಗೆ ಅರಿವು ಮೂಡಿಸುವುದು ಅಗತ್ಯ. ಅದಕ್ಕಾಗಿ ಇದು ನಮ್ಮ ಸಣ್ಣ ಕೊಡುಗೆ ಎನ್ನುತ್ತದೆ ಯುವ ಆರ್ಟ್ ಸ್ಟುಡಿಯೋಸ್ ತಂಡ.
22 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಮಾರಿ 160 ಜನರಿಗೆ ಆಕ್ಸಿಜನ್ ಹಂಚಿದ ಆಕ್ಸಿಜನ್ ಮ್ಯಾನ್!
ದುಬಾರಿ ಕಾರಿನ ಒಡೆಯನಾದ ಮಾಡರ್ನ್ ರೈತ ಶಶಿ! ಕಾರಿನ ಬೆಲೆ ಕೇಳಿದರೆ ಹುಬ್ಬೇರಿಸೋದು ಗ್ಯಾರಂಟಿ