More

    ಸುಶಾಂತ್ ಸಿಂಗ್​​ರನ್ನು ನೆನಪಿಸಲಿದ್ದಾರೆ ಕನ್ನಡದ ಚಂದನ್ ಕುಮಾರ್! ಅದು ಹೇಗೆ?

    ಹೈದರಾಬಾದ್: ಕನ್ನಡದ ಕಿರುತೆರೆ, ಹಿರಿತೆರೆಯಲ್ಲಿ ಬಹಳಷ್ಟು ಖ್ಯಾತಿ ಪಡೆದಿರುವ ಒಬ್ಬ ಯಂಗ್ ನಟ ಅಂದರೆ ಅದು ಚಂದನ್ ಕುಮಾರ್. ಇವರ ಬಣ್ಣದ ಬದುಕಿಗೆ ಮತ್ತೊಂದು ಪ್ಲಸ್ ಪಾಯಿಂಟ್ ಅಂದರೆ ಅದು ಬಿಗ್​​ಬಾಸ್ ಸೀಸನ್ 3ರಲ್ಲಿ ಭಾಗವಹಿಸಿದ್ದು. ಅಷ್ಟೇ, ನಟ ಚಂದನ್ ಕುಮಾರ್ ಬೇರೆ ಬೇರೆ ಭಾಷೆಗಳ ಸಿನಿಮಾಗಳಲ್ಲಿ ಮತ್ತು ಸೀರಿಯಲ್​​​ಗಳಲ್ಲಿ ಸಹ ಅವಕಾಶಗಳು ಹರಿದು ಬಂದವು. ಹಾಗೆಯೇ, ತೆಲುಗಿನ ‘ಸಾವಿತ್ರಮ್ಮಗಾರಿ ಅಬ್ಬಾಯಿ’ ಸೀರಿಯಲ್​​ನಲ್ಲಿ ಅವಕಾಶ ಗಿಟ್ಟಿಸಿಕೊಂಡ ನಟ ಚಂದನ್ ಕುಮಾರ್ ತೆಲುಗಿನ ಕಿರುತೆರೆ ವೀಕ್ಷಕರ ಮನಸ್ಸಿಗೆ ತೀರಾ ಹತ್ತಿರವಾದರು. ಇದೀಗ, ಚಂದನ್ ಮತ್ತೊಂದು ತೆಲುಗು ಸೀರಿಯಲ್​​ನಲ್ಲಿ ನಟಿಸಲು ಮುಂದಾಗಿದ್ದಾರೆ.

    ಸುಶಾಂತ್ ಸಿಂಗ್​​ರನ್ನು ನೆನಪಿಸಲಿದ್ದಾರೆ ಕನ್ನಡದ ಚಂದನ್ ಕುಮಾರ್! ಅದು ಹೇಗೆ?

    ಹೌದು, ಸೀರಿಯಲ್ ಅಥವಾ ಸಿನಿಮಾಗಳ ಪಾತ್ರಗಳ ಆಯ್ಕೆಯ ಬಗ್ಗೆ ತುಂಬಾನೆ ಜಾಗೃತರಾಗಿರುವ ಚಂದನ್ ಮತ್ತೊಂದು ಒಳ್ಳೆ ಕಥೆ ಇರುವ ಸೀರಿಯಲ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಹಿಂದಿ ಭಾಷೆಯ ಜನ ಮೆಚ್ಚಿದ ಧಾರಾವಾಹಿಯಾದ ‘ಪವಿತ್ರ ರಿಶ್ತಾ’ವನ್ನು ತೆಲುಗಿನಲ್ಲಿ ರಿಮೇಕ್ ಮಾಡಲಾಗುತ್ತಿದೆ. ಇದಕ್ಕೆ ತೆಲುಗಿನಲ್ಲಿ ‘ಶ್ರೀಮತಿ ಶ್ರೀನಿವಾಸ್’ ಎಂದು ಹೆಸರಿಡಲಾಗಿದೆ. ಇನ್ನು ಹಿಂದಿ ಭಾಷೆಯ ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ದಿವಂಗತ ನಟ ಸುಶಾಂತ್ ಸಿಂಗ್ ಅವರು ನಟಿಸಿದ್ದರು. ಅದೇ ಧಾರಾವಾಹಿಯ ಮೂಲಕ ತಮ್ಮ ನಟನಾ ಜೀವನವನ್ನು ಸುಶಾಂತ್ ಅರಂಭಿಸಿದ್ದರು.

    ಈಗ, ಅದೇ ಮುಖ್ಯ ಪಾತ್ರದಲ್ಲಿ ತೆಲುಗಿನ ಭಾಷೆಯಲ್ಲಿ ನಟ ಚಂದನ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಈ ಧಾರಾವಾಹಿಗೆಂದು ಚಂದನ್ ಹೈದರಾಬಾದ್​​ಗೆ ಹೋಗಿ ಶೂಟಿಂಗ್​​ನಲ್ಲಿ ತೊಡಗಿದ್ದಾರೆ. ಶೂಟಿಂಗ್ ಸಮಯದಲ್ಲಿ ತೆಗೆಸಿಕೊಂಡ ಒಂದಿಷ್ಟು ಫೋಟೋಗಳನ್ನು ಚಂದನ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

    ಚಂದನ್ ಹಂಚಿಕೊಂಡಿರುವ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಹಾಗಾಗಿ, ತೆಲುಗಿನ ‘ಶ್ರೀಮತಿ ಶ್ರೀನಿವಾಸ್’ ಸೀರಿಯಲ್ ಮೇಲೆ ನಿರೀಕ್ಷೆಗಳು ಹೆಚ್ಚಾಗುತ್ತಿವೆ. ದಿವಂಗತ ನಟ ಸುಶಾಂತ್ ಸಿಂಗ್ ಪಾತ್ರದಲ್ಲಿ ನಟ ಚಂದನ್ ಕುಮಾರ್ ಹೇಗೆ ಮಿಂಚಲಿದ್ದಾರೆ ಎಂಬುದು ಕಾಲವೇ ತಿಳಿಸಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts