ಚಾಮರಾಜನಗರ: ದುಷ್ಕರ್ಮಿಗಳ ತಂಡ ವ್ಯಾಪಾರಿ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಚಾಮರಾಜನಗರದ ಕೆ.ಸಿ.ಮೊಹಲ್ಲಾದ ರಾಜಿಕ್ ಅಹಮದ್ ಎಂಬುವವರ ಮೇಲೆ ಗುಂಡಿನ ದಾಳಿ ನಡೆದಿದೆ. ರಾಜಿಕ್ ಅಹಮದ್ ಅವರ ತೊಡಗೆ ಗುಂಡು ಹೊಕ್ಕಿವೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ.
ಫಾರೂಕ್, ತೌಷಿರ್ ಹಾಗೂ ಶಾಜನ್ ಎಂಬುವವರು ಗುಂಡು ಹಾರಿಸಿ ತಲೆ ಮರಸಿಕೊಂಡಿದ್ದಾರೆ.
ಫಾರೂಕ್ ಹಾಗೂ ರಾಜಿಕ್ ಹಲವು ವರ್ಷಗಳಿಂದ ಕಬ್ಬಿಣದ ವ್ಯವಹಾರವನ್ನು ಪಾಲುದಾರಿಕೆಯಲ್ಲಿ ನಡೆಸುತ್ತಿದ್ದರು.
ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಇಬ್ಬರು ಪ್ರತ್ಯೇಕವಾಗಿ ವ್ಯವಹಾರ ನಡೆಸುತ್ತಿದ್ದರು. ಇತ್ತೀಚೆಗೆ ರಾಜಿಕ್ ಕಡಿಮೆ ಬೆಲೆಗೆ ಕಬ್ಬಿಣ ಮಾರಾಟ ಮಾಡುತ್ತಿದ್ದರು. ಇದರಿಂದ ಫಾರೂಕ್ಗೆ ನಷ್ಟ ಉಂಟಾಗಿತ್ತು. ಕಡಿಮೆ ಬೆಲೆಗೆ ಮಾರಾಟ ಮಾಡದಂತೆ ಅವರು ಎಚ್ಚರಿಸಿದ್ದರು. ಹೀಗಿದ್ದರೂ ರಾಜಿಕ್ ಕಡಿಮೆ ಬೆಲೆಗೆ ಕಬ್ಬಿಣ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಾಮರಾಜನಗರ ಟೌನ್ ಪೊಲೀಸರು ಕೇಸು ದಾಖಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.(ದಿಗ್ವಿಜಯ ನ್ಯೂಸ್)
ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಔಷಧ ಕೊಂಡೊಯ್ಯಲು ಅವಕಾಶ ಕಲ್ಪಿಸಿದ ಶಿಕ್ಷಣ ಇಲಾಖೆ