More

    ಚಾಮರಾಜನಗರದಲ್ಲಿ ಕಬ್ಬಿಣ ವ್ಯಾಪಾರಿ ಮೇಲೆ ಗುಂಡಿನ ದಾಳಿ

    ಚಾಮರಾಜನಗರ: ದುಷ್ಕರ್ಮಿಗಳ ತಂಡ ವ್ಯಾಪಾರಿ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.

    ಚಾಮರಾಜನಗರದ ಕೆ.ಸಿ.ಮೊಹಲ್ಲಾದ ರಾಜಿಕ್​ ಅಹಮದ್​ ಎಂಬುವವರ ಮೇಲೆ ಗುಂಡಿನ ದಾಳಿ ನಡೆದಿದೆ. ರಾಜಿಕ್​ ಅಹಮದ್​ ಅವರ ತೊಡಗೆ ಗುಂಡು ಹೊಕ್ಕಿವೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ.

    ಫಾರೂಕ್, ತೌಷಿರ್ ಹಾಗೂ ಶಾಜನ್ ಎಂಬುವವರು ಗುಂಡು ಹಾರಿಸಿ ತಲೆ ಮರಸಿಕೊಂಡಿದ್ದಾರೆ.
    ಫಾರೂಕ್​ ಹಾಗೂ ರಾಜಿಕ್​ ಹಲವು ವರ್ಷಗಳಿಂದ ಕಬ್ಬಿಣದ ವ್ಯವಹಾರವನ್ನು ಪಾಲುದಾರಿಕೆಯಲ್ಲಿ ನಡೆಸುತ್ತಿದ್ದರು.

    ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಇಬ್ಬರು ಪ್ರತ್ಯೇಕವಾಗಿ ವ್ಯವಹಾರ ನಡೆಸುತ್ತಿದ್ದರು. ಇತ್ತೀಚೆಗೆ ರಾಜಿಕ್​ ಕಡಿಮೆ ಬೆಲೆಗೆ ಕಬ್ಬಿಣ ಮಾರಾಟ ಮಾಡುತ್ತಿದ್ದರು. ಇದರಿಂದ ಫಾರೂಕ್​ಗೆ ನಷ್ಟ ಉಂಟಾಗಿತ್ತು. ಕಡಿಮೆ ಬೆಲೆಗೆ ಮಾರಾಟ ಮಾಡದಂತೆ ಅವರು ಎಚ್ಚರಿಸಿದ್ದರು. ಹೀಗಿದ್ದರೂ ರಾಜಿಕ್​ ಕಡಿಮೆ ಬೆಲೆಗೆ ಕಬ್ಬಿಣ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಚಾಮರಾಜನಗರ ಟೌನ್ ಪೊಲೀಸರು ಕೇಸು ದಾಖಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.(ದಿಗ್ವಿಜಯ ನ್ಯೂಸ್​)

    ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಔಷಧ ಕೊಂಡೊಯ್ಯಲು ಅವಕಾಶ ಕಲ್ಪಿಸಿದ ಶಿಕ್ಷಣ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts