More

    ಸಿಎಂ ಕಾರ್ಯಕ್ರಮಕ್ಕೆ ಬನ್ನಿ

    ಚಾಮರಾಜನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಿ.12ರಂದು ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಭಾಗವಹಿಸಲಿರುವ ಕಾರ್ಯಕ್ರಮಕ್ಕೆ ಕಾರ್ಯಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಲು ಬಿಜೆಪಿ ನಾಯಕರು ಕ್ಷೇತ್ರ ಪ್ರವಾಸ ಶುರು ಮಾಡಿದ್ದಾರೆ.


    ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಗಳೂ ಆಗಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸದಸ್ಯ ಡಾ.ಎ.ಆರ್.ಬಾಬು ಹಲವು ಹಳ್ಳಿಗಳಿಗೆ ಪ್ರತ್ಯೇಕವಾಗಿ ತೆರಳಿ ಕಾರ್ಯಕರ್ತರಿಗೆ ಆಹ್ವಾನ ನೀಡುತ್ತಿದ್ದಾರೆ.


    ತಾಲೂಕಿನ ಕೊತ್ತಲವಾಡಿ, ಹೊನ್ನಹಳ್ಳಿ, ಅಮಚವಾಡಿ, ಅರಕಲವಾಡಿ, ಯಾನಗಹಳ್ಳಿ, ಮಾದಲವಾಡಿ, ಕಿಲಗೆರೆ ಸೇರಿದಂತೆ ಅನೇಕ ಗ್ರಾಮಗಳಿಗೆ ಬಿಜೆಪಿ ನಾಯಕ ಪ್ರೊ.ಮಲ್ಲಿಕಾರ್ಜುನಪ್ಪ ಪಕ್ಷದ ಮುಖಂಡರೊಂದಿಗೆ ಭೇಟಿ ನೀಡಿದರು. ಬಿಜೆಪಿ ಮೈಸುರು ಜಿಲ್ಲಾ ಪ್ರಭಾರಿ ಮೈ.ವಿ. ರವಿಶಂಕರ್, ಜಿಲ್ಲಾ ಉಪಾಧ್ಯಕ್ಷ ಪಿ.ವೃಷಬೇಂದ್ರಪ್ಪ, ಮುಖಂಡರಾದ ಎಸ್.ಬಾಲಸುಬ್ರಮಣ್ಯ, ಅರಕಲವಾಡಿ ಮಹೇಶ್, ಅಮಚವಾಡಿ ಶಕ್ತಿ ಕೇಂದ್ರದ ಅಧ್ಯಕ್ಷ ಕಿಲಗೆರೆ ಬೆಳ್ಳಪ್ಪ ಇದ್ದರು.

    ಅದ್ದೂರಿ ಸ್ವಾಗತ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಂಪುಟದ ಸಹದ್ಯೋಗಿಗಳನ್ನು ಅದ್ದೂರಿಯಾಗಿ ಸ್ವಾಗತಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರ ಆಗಮಿಸಬೇಕೆಂದು ಬಿಜೆಪಿ ಜಿಲ್ಲಾ ಕೋರ್ ಕಮಿಟಿ ಸದಸ್ಯ ಡಾ.ಎ.ಆರ್.ಬಾಬು ಮನವಿ ಮಾಡಿದರು.

    ತಾಲೂಕಿನ ಮಾದಾಪುರ, ಮಂಗಲ, ಯಡಿಯೂರು, ಬದನಗುಪ್ಪೆ, ಭೋಗಾಪುರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಬರುವ 17 ಗ್ರಾಮಗಳಿಗೂ ಪಕ್ಷದ ಮುಖಂಡರೊಂದಿಗೆ ತೆರಳಿ ಮುಖ್ಯಮಂತ್ರಿಗಳ ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳನ್ನು ನೀಡಿ ಮಾತನಾಡಿದರು. ಚಾಮುಲ್ ಮಾಜಿ ನಿರ್ದೇಶಕ ಕೆ.ಆರ್.ಬಸವರಾಜು, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಕುಮಾರಸ್ವಾಮಿ, ನಟರಾಜು, ನಾಗಶೆಟ್ಟಿ, , ಬದನಗುಪ್ಪೆ ಬಸವಣ್ಣ ಬಿಜೆಪಿ ಶಕ್ರಿಕೇಂದ್ರದ ಅಧ್ಯಕ್ಷರು, ಗ್ರಾಪಂ ಸದಸ್ಯರು, ಮುಖಂಡರು ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts