More

    ಬೈಕ್​ನಲ್ಲಿ ನಟ ದರ್ಶನ್​ ಸುತ್ತಾಟ; 15 ಜನ ಸ್ನೇಹಿತರೊಂದಿಗೆ ಜಾಲಿ ಟ್ರಿಪ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್​ ಸದಾ ಒಂದಿಲ್ಲೊಂದು ಕಡೆ ಸುತ್ತಾಡುತ್ತಿರುತ್ತಾರೆ. ಲಾಕ್​ಡೌನ್​ ಸಡಿಲವಾಗುತ್ತಿದ್ದಂತೆ ಮಲೆಮಹದೇಶ್ವರ ಬೆಟ್ಟ, ಮೈಸೂರು, ಧಾರವಾಡ, ದಾವಣಗೆರೆಗೆ ಹೋಗಿ ಬಂದಿದ್ದರು. ಇದೀಗ ಸ್ನೇಹಿತರ ಜತೆಗೆ ಬೈಕ್​ ಟ್ರಿಪ್​ ಮಾಡುತ್ತಿದ್ದಾರೆ.

    ಇದನ್ನೂ ಓದಿ: ನಟ ಸೋನು ಸೂದ್​ಗೆ ಚುನಾವಣಾ ಆಯೋಗ ನೀಡಿತೊಂದು ವಿಶೇಷ ಜವಾಬ್ದಾರಿ

    ಸ್ಯಾಂಡಲ್​ವುಡ್​ ನಟರು ಮತ್ತು ನಿರ್ದೇಶಕರೊಟ್ಟಿಗೆ ದರ್ಶನ್​ ಸವಾರಿ ಮಾಡಿದ್ದಾರೆ. ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ಪ್ರಜ್ವಲ್ ದೇವರಾಜ್, ಪ್ರಣವ್ ದೇವರಾಜ್​, ಧರ್ಮ ಕೀರ್ತಿರಾಜ್, ಪನ್ನಗಾ ಭರಣ, ಯಶಸ್ ಸೂರ್ಯ ಜತೆಗೆ ಇನ್ನೂ ಹಲವರು ಸೇರಿ ಒಟ್ಟಿಗೆ ಬೈಕ್​ನಲ್ಲಿ ಸುತ್ತಾಡಿದ್ದಾರೆ.


    ಸದ್ಯ ಆ ಜಾಲಿ ಟ್ರಿಪ್​ನ ಫೋಟೋಗಳೆಲ್ಲ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಡಿ ಬಾಸ್ ಅಭಿಮಾನಿಗಳಿಗೂ ಇದು ಖುಷಿ ನೀಡಿದ್ದು, ರಾಬರ್ಟ್ ಚಿತ್ರದ ಬಿಡುಗಡೆ ಆಗಲಿ ಎಂಬ ಸಂದೇಶವನ್ನೂ ಕಮೆಂಟಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts