ಚಳ್ಳಕೆರೆ: ಕಷ್ಟದ ಪರಿಸ್ಥಿತಿಯಲ್ಲಿ ಸಣ್ಣ ಸಹಕಾರವು ಬದುಕಿನ ಆತ್ಮರ್ಸ್ಥೈರ್ಯ ಹೆಚ್ಚಿಸುತ್ತದೆ ಎಂದು ರಾವ್ಸ್ ಕುಟುಂಬ ಸಹಾಯ ಟ್ರಸ್ಟ್ನ ಮುಖಂಡ ಜೆ.ಬಿ.ರಾಮಕೃಷ್ಣ ಹೇಳಿದರು.
ತಾಲೂಕಿನ ಜಾಜೂರಿನಲ್ಲಿ 600 ಮನೆಗಳಿಗೆ ರಾವ್ಸ್ ಕುಟುಂಬ ಸಹಾಯ ಟ್ರಸ್ಟ್ನಿಂದ ಪ್ರತಿ ಮನೆಗೆ 8 ಕೆಜಿ ರಾಗಿ, ಅಡುಗೆ ಎಣ್ಣೆ, ಸಕ್ಕರೆ, ಬೇಳೆ ವಿತರಿಸಿ ಮಾತನಾಡಿದರು.
ಕರೊನಾ ವೈರಸ್ನಿಂದ ಇಡೀ ದೇಶದ ಬಡ ಜನತೆ ಸಂಕಷ್ಟದಲ್ಲಿದ್ದಾರೆ. ಪರಸ್ಪರ ಸಹಕಾರದಿಂದ ಕಷ್ಟದ ಪರಿಸ್ಥಿತಿ ಧೈರ್ಯವಾಗಿ ಎದುರಿಸಬೇಕಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಭೀಮಕ್ಕ, ಸದಸ್ಯ ರವಿ, ಪಿಡಿಒ ಎನ್.ಆರ್.ತಿಪ್ಪೇಸ್ವಾಮಿ ಇದ್ದರು.