More

    ಸಾರ್ವಜನಿಕರ ಸ್ಪಂದನೆ ಮುಖ್ಯ

    ಚಳ್ಳಕೆರೆ: ಕರೊನಾ ನಿಯಂತ್ರಣಕ್ಕೆ ಸಾರ್ವಜನಿಕರ ಸ್ಪಂದನೆ ಬಹಳ ಮುಖ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಹೇಳಿದರು.

    ನಗರದಲ್ಲಿ ಶುಕ್ರವಾರ ಪೊಲೀಸ್ ಇಲಾಖೆ ವತಿಯಿಂದ ಕರೋನಾ ಜಾಗೃತಿಗಾಗಿ ಹಮ್ಮಿಕೊಂಡಿದ್ದ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಪೊಲೀಸ್ ಉಪ ಅಧೀಕ್ಷಕ ರೋಷನ್ ಜಮೀರ್, ವೃತ್ತ ನಿರೀಕ್ಷಕ ಈ.ಆನಂದ್, ಪೊಲೀಸ್ ಉಪ ನಿರೀಕ್ಷಕ ನೂರ್ ಅಹಮ್ಮದ್ ಇತರರಿದ್ದರು.

    ಕೊಳೆಗೇರಿಯಲ್ಲಿ ಜಾಗೃತಿ ಜಾಥಾ ಅಗತ್ಯ: ನಗರ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ಮೂಡಿಸುವ ಜತೆಗೆ ಹಳ್ಳಿ, ಸ್ಲಂ, ಕೂಲಿ-ಕಾರ್ಮಿಕರು ವಾಸಿಸುವ ಬಡಾವಣೆಗಳಲ್ಲಿ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಎಸ್.ಎಚ್.ಸೈಯದ್ ಆಗ್ರಹಿಸಿದ್ದಾರೆ.

    ಈಗಲೂ ಈ ಪ್ರದೇಶಗಳ ಜನರಲ್ಲಿ ಕರೊನಾ ರೋಗ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಕೇವಲ ಊಹಪೋಹಗಳನ್ನೇ ಜನರು ನಂಬಿಕೊಂಡಿದ್ದಾರೆ. ಆದ್ದರಿಂದ ಸಂಬಂಧಿಸಿದವರು ಈ ಪ್ರದೇಶದತ್ತ ಗಮನಹರಿಸಬೇಕು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts