ಶೃಂಗೇರಿ: ಪಟ್ಟಣದ ಹೆಬ್ಬಾಗಿಲು ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ಚೈತ್ರ ಏಕಾದಶಿ ಅಂಗವಾಗಿ ಶನಿವಾರ ಭಜನಾ ಕಾರ್ಯಕ್ರಮ ನಡೆಸಲಾಯಿತು.
ಶೃಂಗೇರಿ ಜಿಎಸ್ಬಿ ಮಹಿಳಾ ಮಂಡಳಿ, ಬೆಳ್ಮಣು ವಿಠೋಬ ಮಂಡಳಿ, ಕೊಪ್ಪ ಜಿಎಸ್ಬಿ ಮಂಡಳಿ, ತೀರ್ಥಹಳ್ಳಿ, ಹರಿಖಂಡಿಗೆ, ಶಿರ್ವ ಮುಂತಾದ ಗ್ರಾಮಗಳ ಭಕ್ತರು ಭಜನಾ ಕಾರ್ಯಕ್ರಮ ನೆರವೇರಿಸಿದರು. ಅರ್ಚಕ ಜಿತೇಂದ್ರ ಭಟ್ ಪೂಜಾ ವಿಧಿವಿಧಾನಗಳನ್ನು ನಿರ್ವಹಿಸಿದರು.