ನವದೆಹಲಿ: ಮೇ 3ರ ನಂತರ ಲಾಕ್ಡೌನ್ ತೆರವು ಬಳಿಕ ಹಲವು ನಿರ್ಬಂಧಗಳನ್ನು ಕೇಂದ್ರ ಸರ್ಕಾರ ಹಂತಹಂತವಾಗಿ ಸಡಿಲಿಸಲಿದೆ. ಅದಕ್ಕೆ ಪೂರಕವಾಗಿ ಹಲವು ಅಗತ್ಯ ಸೇವೆಗಳಿಗೆ ಅನುಮತಿ ನೀಡುತ್ತಿದೆ.
ಮಂಗಳವಾರವಷ್ಟೇ ಕೃಷಿ ಉತ್ಪನ್ನ ಹಾಗೂ ಶೈಕ್ಷಣಿಕ ಪಠ್ಯಪುಸ್ತಕಗಳ ಮಾರಾಟ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಿತ್ತು. ಜತೆಗೆ ಬೇಸಿಗೆ ಕಾರಣಕ್ಕೆ ಎಲೆಕ್ಟ್ರಿಕ್ ಫ್ಯಾನ್ಗಳ ದುರಸ್ತಿ ಅಂಗಡಿಗಳಿಗೂ ಅವಕಾಶ ನೀಡಿದೆ.
ಇದೀಗ ಮತ್ತಷ್ಟು ನಿರ್ಬಂಧಗಳನ್ನು ತೆರವುಗೊಳಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ಅದರಂತೆ, ಪ್ರಿಪೇಡ್ ಮೊಬೈಲ್ಗಳಿಗೆ ಕರೆನ್ಸಿ ರೀಚಾರ್ಜ್ ಮಾಡುವ ಅಂಗಡಿಗಳನ್ನು ತೆರೆಯಬಹುದಾಗಿದೆ. ಸಾರ್ವಜನಿಕ ಅಗತ್ಯ ಸೇವೆಗಳಲ್ಲಿ ಇದೂ ಒಂದಾಗಿದೆ ಎಂದು ಹೇಳಿದೆ.
ಇದಲ್ಲದೇ, ಮನೆಯಲ್ಲಿಯೇ ಇರುವ ಹಿರಿಯರನ್ನು ನೋಡಿಕೊಳ್ಳಲು ಸಹಾಯಕರು ಹಾಗೂ ಆರೈಕೆ ನೀಡುವವರ ಕೆಲಸಕ್ಕೆ ಅನುಮತಿಸಿದೆ.
ಅತ್ಯಾವಶ್ಯಕ ವಸ್ತುಗಳ ಸರಬರಾಜು ಅನ್ವಯ ಬ್ರೆಡ್ ತಯಾರಿಸುವ ಫ್ಯಾಕ್ಟರಿಗಳು ಕಾರ್ಯಾರಂಭಿಸಬಹುದು. ಹಾಲು ಸಂಸ್ಕರಣಾ ಘಟಕಗಳು, ಹಿಟ್ಟಿನ ಗಿರಣಿಗಳು ಹಾಗೂ ದಾಲ್ ಮಿಲ್ಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಬಗ್ಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ರವಾನಿಸಿದ್ದಾರೆ.
ತುತ್ತು ಅನ್ನಕ್ಕೂ ಹಾಹಾಕಾರ, ಹಸಿವಿನಿಂದ ಕಂಗೆಡಲಿದ್ದಾರೆ 26 ಕೋಟಿ ಜನ, ವಿಶ್ವಸಂಸ್ಥೆ ನೀಡಿದೆ ಆಘಾತಕಾರಿ ವರದಿ