ಬೆಂಗಳೂರು: ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್ ಸಿಡಿ ಪ್ರಕರಣದ ‘ಸಂತ್ರಸ್ತ’ ಯುವತಿ ಪ್ರತಿಪಕ್ಷ ನಾಯಕರ ಸಹಾಯ ಬೇಡಿದ್ದು, ಇದು ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ.
ಸಿಡಿ ಪ್ರಕರಣ ಬೆಳಕಿಗೆ ಬಂದ ಬಳಿಕ ಕಣ್ಮರೆಯಾಗಿದ್ದ ಯುವತಿ ಅಜ್ಞಾತ ಸ್ಥಳದಿಂದ ಕಳುಹಿಸಿದ್ದ ವಿಡಿಡೋ ಮಾ.13ರಂದು ಬಿಡುಗಡೆಯಾಗಿತ್ತು.ಆ ವಿಡಿಯೋದಲ್ಲಿ ”ನನ್ನನ್ನು ಬಲಿಪಶು ಮಾಡಲಾಗಿದೆ. ಗೃಹ ಸಚಿವರು ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕು. ರಮೇಶ್ ಜಾರಕಿಹೊಳಿ ನನಗೆ ಕೆಲಸ ಕೊಡಿಸುವುದಾಗಿ ನಂಬಿಸಿ, ನನ್ನನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ನನ್ನ ಮಾನಮರ್ಯಾದೆ ಊರು ತುಂಬಾ ಹರಾಜಾಗಿದೆ. ನನ್ನ ತಂದೆ ತಾಯಿ ಹಾಗೂ ನಾನು ಮೂರ್ನಾಲ್ಕು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೇವೆ. ಆ ಅಶ್ಲೀಲ ವಿಡಿಯೋ ಹೇಗೆ ಮಾಡಿದ್ದಾರೋ ನನಗೆ ಗೊತ್ತಿಲ್ಲ. ದಯವಿಟ್ಟು ನನಗೆ ರಕ್ಷಣೆ ನೀಡಬೇಕು” ಎಂದು ಕೋರಿದ್ದಳು. ಇದೀಗ ಇಂದು 2ನೇ ವಿಡಿಯೋ ಬಿಡುಗಡೆ ಮಾಡಿರುವ ಯುವತಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಪ್ರತಿಪಕ್ಷ ನಾಯಕರ ಹೆಸರನ್ನು ಪ್ರಸ್ತಾಪಿಸಿದ್ದಾಳೆ. ಇದನ್ನೂ ಓದಿರಿ ಸಿಡಿ ಲೇಡಿ ಮತ್ತೆ ವಿಡಿಯೋ ಮೂಲಕ ಪ್ರತ್ಯಕ್ಷ; ಎರಡನೇ ವಿಡಿಯೋ ಬಿಡುಗಡೆ
ಮಾ.12ರಂದೇ ಪೊಲೀಸ್ ಆಯುಕ್ತರಿಗೆ ವಿಡಿಯೋ ಮೂಲಕ ದೂರು ನೀಡಿದ್ದೆ. ಎಸ್ಐಟಿಗೂ ವಿಡಿಯೋ ಮೂಲಕ ದೂರು ನೀಡಿದ್ದೆ. ಆದರೆ ಆ ವಿಡಿಯೋ ರಿಲೀಸ್ ಆಗಿದ್ದು ಮಾ.13ರಂದು. ಅದೂ ರಮೇಶ್ಜಾರಕಿಹೊಳಿ ಅವರು ತರಾತುರಿಯಲ್ಲಿ ದೂರು ಕೊಟ್ಟ ಅರ್ಧ ಗಂಟೆಯ ಬಳಿಕ. ನಾನು ಕಳುಹಿಸಿದ ದಿನವೇ ನನ್ನ ವಿಡಿಯೋ ಬಿಡುಗಡೆಯಾಗಿಲ್ಲ. ರಮೇಶ್ ದೂರು ನೀಡೋವರೆಗೂ ಎಫ್ಐಆರ್ ದಾಖಲಿಸಿಲ್ಲ. ಇದರಲ್ಲೇ ಗೊತ್ತಾಗುತ್ತೆ ಎಸ್ಐಟಿ ಏನು ಅನ್ನೋದು. ಎಸ್ಐಟಿ ಯಾರ ಪರ ಇದೆ ಅನ್ನೋದು ಗೊತ್ತಾಗ್ತಿಲ್ಲ ಎಂದು ಎಸ್ಐಟಿ ತನಿಖೆಯನ್ನ ಪ್ರಶ್ನಿಸಿರು ಯುವತಿ, ನಾನು ಈಗಲೇ ಎಸ್ಐಟಿ ಮುಂದೆ ಹಾಜರಾಗೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ.
ನಾನು ಕಿಡ್ನ್ಯಾಪ್ ಆಗಿದ್ದೇನೆ ಅಂತ ನನ್ನ ಅಪ್ಪ-ಅಮ್ಮ ದೂರು ಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ ನನ್ನ ಪ್ರಕಾರ ಅವರು ಸ್ವಇಚ್ಛೆಯಿಂದ ದೂರು ಕೊಟ್ಟಿಲ್ಲ. ನಾನು ತಪ್ಪೇ ಮಾಡಿಲ್ಲ. ಈ ಬಗ್ಗೆ ನನ್ನ ಅಪ್ಪ-ಅಮ್ಮನಿಗೆ ಗೊತ್ತಿದೆ. ನನ್ನ ಅಪ್ಪ-ಅಮ್ಮ ಸೇಫ್ ಆಗಿದ್ದಾರೆ ಅಂತ ಗೊತ್ತಾದ ಬಳಿಕವೇ ನಾನು ಎಸ್ಐಟಿ ತನಿಖೆಗೆ ಹಾಜರಾಗುವೆ ಎಂದಿರುವ ಯುವತಿ, ನೇರವಾಗಿಯೇ ಪ್ರತಿಪಕ್ಷ ನಾಯಕರ ಸಹಾಯ ಕೋರಿದ್ದಾಳೆ.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ರಮೇಶ್ ಕುಮಾರ್ ಮತ್ತು ಇನ್ನಿತರ ಮಹಿಳಾ ಸಂಘಟನೆಯವರಿಗೆ ಕೇಳಕೊಳ್ತೇನೆ. ದಯವಿಟ್ಟು ನನ್ನ ಅಪ್ಪ-ಅಮ್ಮನನ್ನು ರಕ್ಷಿಸಿ ಎಂದು ವಿಡಿಯೋ ಮೂಲಕ ಯುವತಿ ಬೇಡಿಕೊಂಡಿದ್ದಾಳೆ. ಆ ಮೂಲಕ ಪೊಲೀಸ್ ತನಿಖೆ ಮೇಲೆ ತನಗೆ ನಂಬಿಕೆ ಇಲ್ಲ, ಪ್ರತಿಪಕ್ಷ ನಾಯಕರೇ ನ್ಯಾಯ ಕೊಡಿಸಬೇಕು ಎಂದು ಪರೋಕ್ಷವಾಗಿ ಹೇಳಿದ್ದಾಳೆ.
ಹೊಸ ಕಾರಿನ ಪೂಜೆಗೆಂದು ಧರ್ಮಸ್ಥಳಕ್ಕೆ ಹೊರಟಿದ್ದವರ ಬಾಳಲ್ಲಿ ದುರಂತ! ಇಬ್ಬರ ಸಾವು, 6 ಜನರ ಸ್ಥಿತಿ ಗಂಭೀರ