ಬೆಂಗಳೂರು: ರಾಜ್ಯದಲ್ಲಿ ಈಗ ಏನಿದ್ದರೂ ಸಿಡಿಯದೇ ಸದ್ದು. ಒಂದಲ್ಲ, ಎರಡಲ್ಲ ಇನ್ನೂ 23 ಸಿಡಿಗಳಿವೆ ಎಂದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಮತ್ತೊಂದು ಜೋರು ಸದ್ದು ಮಾಡಿದ್ದಾರೆ.
ವಿಧಾನಸೌಧ ಮೊಗಸಾಲೆಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಸದ್ಯಕ್ಕೆ ಸಿಡಿ ರಾಜಕಾರಣ, ಕಲೆಕ್ಷನ್ದೇ ಭರಾಟೆ. ಇಷ್ಟಕ್ಕೂ ಈಗ ಹೊರ ಬಂದಿರುವ ಸಿಡಿಗೂ ನಾನು ಹೇಳಿದ ಸಿಡಿಗೂ ಸಂಬಂಧವಿಲ್ಲ. ಎರಡೂ ಬೇರೆ ಬೇರೆಯಾಗಿವೆ ಎಂಬ ಮಾತು ಸೇರಿಸಿದರು.
ಬಯಲಾದ ಅಶ್ಲೀಲ ಸಿಡಿ ಪ್ರಕರಣದಲ್ಲಿ ಎರಡೂ ಕಡೆಯವರ ಷಡ್ಯಂತ್ರವಿದೆ. ಬಾಧಿತ ಪ್ರಭಾವಿಗಳು ಈ ಷಡ್ಯಂತ್ರ ಭೇದಿಸುವುದು ನಿಶ್ಚಿತ. ಅಪ್ಪ-ಮಕ್ಕಳ ಸಿಡಿಯೂ ಕೆಲವರ ಬಳಿಯಿದೆ. ಇಷ್ಟರಲ್ಲೇ ಬಹಿರಂಗಪಡಿಸಿದರೂ ಅಚ್ಚರಿಯಿಲ್ಲ ಎಂದು ಯತ್ನಾಳ್ ಮತ್ತೊಂದು ಸ್ಫೋಟಕ ಹೇಳಿಕೆಯಿತ್ತರು.
ಸಿಐಡಿಗೆ ಸಿಡಿ ಕೇಸ್! ಷಡ್ಯಂತ್ರ ಮಾಡಿದ್ದವರನ್ನ ಜೈಲಿಗೆ ಕಳಿಸೋದೇ ನನ್ನ ಗುರಿ: ಜಾರಕಿಹೊಳಿ
ಸೊಸೆಯನ್ನ ಕೊಂದು ಮಾವ ಆತ್ಮಹತ್ಯೆ! ಊಟಕ್ಕೆ ಬಂದ ಮಗನಿಗೆ ಕಾದಿತ್ತು ಆಘಾತ…
ನಾನು 20 ವರ್ಷ ಕಾಂಗ್ರೆಸ್ನಲ್ಲೇ ಇದ್ದೆ, ಜಾರಕಿಹೊಳಿ ಸಿಡಿ ಮಾಡಿದ್ದೇ ಕಾಂಗ್ರೆಸ್: ಸಚಿವರ ಸ್ಫೋಟಕ ಹೇಳಿಕೆ