More

    ಸುಮ್ಮನೆ ಸುಳ್ಳು ಹೇಳಬೇಡಿ: ಸಿಬಿಐ ಎಚ್ಚರಿಕೆ

    ಮುಂಬೈ: ಸುಶಾಂತ್​ ಮತ್ತು ರಿಯಾ ಚಕ್ರವರ್ತಿ ಇಬ್ಬರನ್ನೂ ಜೂನ್​ 13ರಂದು ನೋಡಿದ್ದಾಗಿ, ರಿಯಾ ಪಕ್ಕದ ಮನೆಯ ಡಿಂಪಲ್​ ತವಾನಿ ಎನ್ನುವವರು ಹೇಳಿದ್ದರು. ಇದೀಗ ಅವರು ಉಲ್ಟಾ ಹೊಡೆದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಅವರಿಗೆ ಎಚ್ಚರಿಕೆ ಕೊಟ್ಟು ಕಳಿಸಿದ್ದಾರೆ.

    ಇದನ್ನೂ ಓದಿ: ಚಿರು ಹುಟ್ಟುಹಬ್ಬಕ್ಕೆ ‘ಕ್ಷತ್ರಿಯ’ ಚಿತ್ರದ ಟೀಸರ್ ಬಿಡುಗಡೆ

    ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡಿದ್ದು ಜೂನ್​ 14ರಂದು. ಅದರ ಮುನ್ನಾ ದಿನ ಅಂದರೆ ಜೂನ್​ 13ರಂದು ಸುಶಾಂತ್​ ಅವರು ರಿಯಾ ಮನೆಗೆ ಬಂದಿದ್ದರು ಮತ್ತು ಅವರಿಬ್ಬರನ್ನು ನೋಡಿದ್ದಾಗಿ ಡಿಂಪಲ್​ ಮಾಧ್ಯಮಗಳೆದುರು ಹೇಳಿಕೊಂಡಿದ್ದರು.

    ಈ ವಿಷಯವಾಗಿ ಇತ್ತೀಚೆಗೆ ಸಿಬಿಐ ಅಧಿಕಾರಿಗಳು, ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂದರ್ಭದಲ್ಲಿ ಡಿಂಪಲ್​ ಅವರು ತಾವು ಸುಶಾಂತ್​ ಮತ್ತು ರಿಯಾ ಅವರನ್ನು ಆ ದಿನ ಒಟ್ಟಿಗೆ ನೋಡಿಲ್ಲ ಮತ್ತು ಆ ವಿಷಯವನ್ನು ಬೇರೆ ಯಾರೋ ತಮಗೆ ಹೇಳಿದರು ಎಂದು ಹೇಳಿದ್ದಾರೆನ್ನಲಾಗಿದೆ. ಅಷ್ಟೇ ಅಲ್ಲ, ತಮಗೆ ಈ ವಿಷಯವನ್ನು ಹೇಳಿದ ವ್ಯಕ್ತಿ ಸಹ ಸುಶಾಂತ್​ ಮತ್ತು ರಿಯಾ ಒಟ್ಟಿಗೆ ಇದ್ದುದನ್ನು ನೋಡಿಲ್ಲ ಎಂದು ಒಪ್ಪಿಕೊಂಡಿದ್ದಾರಂತೆ.

    ತನಿಖೆಯ ಹಾದಿಯನ್ನು ಡಿಂಪಲ್​ ಅವರು ತಪ್ಪಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಸಿಬಿಐ ಅಧಿಕಾರಿಗಳು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ತಮಗೆ ಗೊತ್ತಿಲ್ಲದ ವಿಷಯದ ಬಗ್ಗೆ ಹೀಗೆ ಮಾಧ್ಯಮದವರ ಎದುರು ಬೇಕಾಬಿಟ್ಟಿ ಮಾತನಾಡಬಾರದು ಎಂದು ಹೇಳಿ ಕಳುಹಿಸಿದ್ದಾರಂತೆ.

    ಇದನ್ನೂ ಓದಿ: ‘ಬೆಲ್​ ಬಾಟಮ್​’ ಮುಗೀತು; ‘ಪೃಥ್ವಿರಾಜ್​’ ಆದ ಅಕ್ಷಯ್​ …

    ಇನ್ನು, ರಿಯಾ ಚಕ್ರವರ್ತಿ ಅವರನ್ನು ಸುಶಾಂತ್​ ಸಾವಿನ ಪ್ರಕರಣದಲ್ಲಿ ನಾರ್ಕೋಟಿಕ್ಸ್​ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ಬಂಧಿಸಿದ್ದು, 28 ದಿನಗಳ ನಂತರ ಕಳೆದ ವಾರವಷ್ಟೇ ರಿಯಾಗೆ ಬೇಲ್​ ಸಿಕ್ಕಿದೆ.

    ‘ತಲೈವಿ’ ಚಿತ್ರದ ಇನ್ನೊಂದು ಹಂತದ ಚಿತ್ರೀಕರಣದ ಮುಗಿಸಿದ ಕಂಗನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts