ಮುಂಬೈ: ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ರನ್ನು ಭಾನುವಾರ (ಮಾ. 8) ಮುಂಜಾನೆ ಅರೆಸ್ಟ್ ಮಾಡಿದ್ದ ಇ.ಡಿ.ಅಧಿಕಾರಿಗಳು ಮುಂಬೈ ಸೆಷನ್ಸ್ ಕೋರ್ಟ್ಗೆ ಹಾಜರು ಪಡಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ಮಾ.11ರವರೆಗೆ ರಾಣಾ ಅವರನ್ನು ಇ.ಡಿ.ವಶಕ್ಕೆ ನೀಡಿ ಆದೇಶ ಹೊರಡಿಸಿದ ಬೆನ್ನಲ್ಲೇ ಸಿಬಿಐ ಕೂಡ ಅವರ ವಿರುದ್ಧ ಎಫ್ಐಆರ್ ದಾಖಲು ಮಾಡಿದೆ.
ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೋರೇಶನ್ (ಡಿಎಚ್ಎಫ್ಎಲ್), ಯೆಸ್ ಬ್ಯಾಂಕ್ ಮತ್ತು ರಾಣಾ ಕಪೂರ್ ಅವರ ಪುತ್ರಿಯರ ಮಾಲೀಕತ್ವದ ಕಂಪನಿಗಳ ನಡುವೆ ಅಕ್ರಮ ಹಣ ವಹಿವಾಟು ನಡೆದಿದೆ ಎಂಬ ಶಂಕೆಯಡಿ ಸಿಬಿಐ ಕೂಡ ವಿಚಾರಣೆ ಕೈಗೆತ್ತಿಕೊಂಡಿದೆ.
ಈ ಮಧ್ಯೆ ಯೆಸ್ ಬ್ಯಾಂಕ್ ಬಿಕ್ಕಟ್ಟಿಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಕಾಂಗ್ರೆಸ್ ಸೇರಿ ಪ್ರತಿಪಕ್ಷಗಳು ಹೇಳುತ್ತಿವೆ.
ಸಿಬಿಐ ರಾಣಾ ಕಪೂರ್ ವಿರುದ್ಧ ಎಫ್ಐಆರ್ ದಾಖಲು ಮಾಡುತ್ತಿದ್ದಂತೆ ಇ.ಡಿ. ಅಧಿಕಾರಿಗಳು ಜಾರಿ ಪ್ರಕರಣ ಮಾಹಿತಿ ವರದಿ (ಇಸಿಐಆರ್)ನ್ನು ದಾಖಲಿಸಿದ್ದಾರೆ.
ದೇಶ ಬಿಟ್ಟು ಹೊರಟಿದ್ದ ರಾಣಾ ಪುತ್ರಿ
ಯೆಸ್ ಬ್ಯಾಂಕ್ ದಿವಾಳಿಗೆ ಸಂಬಂಧಪಟ್ಟಂತೆ ರಾಣಾ ಕಪೂರ್ ಅವರ ಪತ್ನಿ ಬಿಂದು ಕಪೂರ್, ಪುತ್ರಿಯರು ಹಾಗೂ ಅಳಿಯನನ್ನು ಇ.ಡಿ. ಶನಿವಾರ ವಿಚಾರಣೆಗೆ ಒಳಪಡಿಸಿದೆ. ಅಷ್ಟಾದ ಕೂಡಲೇ ರಾಣಾ ಅವರ ಪುತ್ರಿ ರೋಶಿನಿ ಕಪೂರ್ ಮಾ.8ರಂದು ಲಂಡನ್ಗೆ ತೆರಳಲು ಸಜ್ಜಾಗಿದ್ದರು. ವಿಮಾನ ಏರಲು ಮುಂಬೈ ಏರ್ಪೋರ್ಟ್ಗೆ ಬಂದ ಅವರನ್ನು ಅಧಿಕಾರಿಗಳು ತಡೆದಿದ್ದಾರೆ.
ರಾಣಾ ಕಪೂರ್ ಹಾಗೂ ಅವರ ಕುಟುಂಬಕ್ಕೆ ಇ.ಡಿ.ಈಗಾಗಲೇ ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದು, ಅದರ ಅನ್ವಯ ದೇಶಬಿಟ್ಟು ಹೋಗುವಂತಿಲ್ಲ. (ಏಜೆನ್ಸೀಸ್)
ಯೆಸ್ ಬ್ಯಾಂಕ್ ಸಂಸ್ಥಾಪಕನಿಗೆ ಪೀಕಲಾಟ; ಸದ್ಯಕ್ಕೆ ತಪ್ಪುವಂತೆ ಕಾಣುತ್ತಿಲ್ಲ ಇ.ಡಿ. ಹಿಡಿತ