More

    ಕೇಂದ್ರದಿಂದ ಬಡವರ ಖಾತೆಗೆ ಬರಲಿದೆ ಮತ್ತೊಂದು ಸುತ್ತಿನ ಹಣ..?

    ನವದೆಹಲಿ: ದೇಶದ ಆರ್ಥಿಕ ಪುನಶ್ಚೇತನಕ್ಕೆ ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್​ ಘೋಷಿಸಿದ್ದಾರೆ. ಇದರಲ್ಲಿ ಏನೇನು ಇರಲಿದೆ. ಯಾರಿಗೆಲ್ಲ ಅನುಕೂಲವಾಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

    ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಈ ಪ್ಯಾಕೇಜ್​ನ ವಿಸ್ತೃತ ಮಾಹಿತಿಯನ್ನು ನೀಡಲಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈಗಾಗಲೇ ಘೋಷಿಸಲಾಗಿರುವ ಆರ್ಥಿಕ ನೆರವಿನ ಯೋಜನೆಯನ್ನೂ ಒಳಗೊಂಡು ಇದರ ಗಾತ್ರ 20 ಲಕ್ಷ ಕೋಟಿ ರೂ. ಆಗಿರಲಿದೆ.

    ಇದನ್ನೂ ಓದಿ; ಈ ಮಹಿಳೆಯರು ಎರಡು ತಿಂಗಳಲ್ಲಿ ತಯಾರಿಸಿದ್ದು 10 ಕೋಟಿ ಮಾಸ್ಕ್​

    ಈ ಹಿಂದೆ ಜನ್​ಧನ್​ ಖಾತೆಗಳಿಗೆ ಮೂರು ತಿಂಗಳ ಅವಧಿಗೆ ತಲಾ ಐನೂರು ರೂ.ಗಳಂತೆ ಪಾವತಿ, ಕಾರ್ಮಿಕರಿಗೆ ಆರ್ಥಿಕ ನೆರವು, ಬ್ಯಾಂಕುಗಳು ಘೋಷಿಸಿದ್ದ ವಿನಾಯ್ತಿ ಮೊದಲಾದವುಗಳು ಕೂಡ ಈ ಪ್ಯಾಕೇಜ್​ನಲ್ಲಿ ಒಳಗೊಂಡಿವೆ. ಹೀಗಾಗಿ ನೈಜ ಪ್ಯಾಕೇಜ್​ನ ಮೊತ್ತ 12 ಲಕ್ಷ ಕೋಟಿ ರೂ. ಆಗಿರಲಿವೆ ಎಂದು ಅಂದಾಜಿಸಲಾಗಿದೆ.

    ಹಾಗಿದ್ದರೆ, ಈ ಬಾರಿ ನಿರೀಕ್ಷಿಸಬಹುದಾದ ನೆರವು ಏನು ಎಂಬುದು ಪ್ರಶ್ನೆ. ಕೃಷಿಯಿಂದ ಆರಂಭಿಸಿ ಕೈಗಾರಿಕೆವರೆಗಿನ ಎಲ್ಲ ಕ್ಷೇತ್ರಗಳನ್ನು ಒಳಗೊಂಡಂತೆ ಸಮಗ್ರ ಯೋಜನೆಗೆ ಬುಧವಾರ (ಮೇ 13) ಕೇಂದ್ರ ಸಂಪುಟ ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಬಳಿಕ ಇದರ ಅಧಿಕೃತ ಘೋಷಣೆಯಾಗಲಿದೆ.

    ಇದನ್ನೂ ಓದಿ; ಕರೊನಾದಿಂದ ಹೆಚ್ಚಾಗಲಿದೆ ಎಚ್​ಐವಿ ಸೋಂಕಿತರ ಸಾವಿನ ಸಂಖ್ಯೆ..!

    ಬಡವರ ಖಾತೆಗಳಿಗೆ ಮತ್ತೊಂದು ಸುತ್ತಿನ ನಗದು ವರ್ಗಾವಣೆ, ಕೈಗಾರಿಕೆಗಳಿಗೆ ಬಂಡವಾಳ ಕಲ್ಪಿಸಲು ಸಾಲ ಸೌಲಭ್ಯ ನೀಡಲಾಗುತ್ತದೆ. ಜತೆಗೆ ಬ್ಯಾಂಕಿಂಗ್​ ಹಾಗೂ ವಿಮಾ ಕ್ಷೇತ್ರಕ್ಕೂ ಉತ್ತೇಜನ ದೊರೆಯಲಿದೆ ಎಂದು ಈ ಯೋಜನೆಯನ್ನು ಬಲ್ಲ ಮೂಲಗಳು ತಿಳಿಸಿವೆ.
    ಲಾಕ್​ಡೌನ್​ನಿಂದಾಗಿ ಸಂಘಟಿತ ವಲಯದ ಶೇ.67 ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಜತೆಗೆ, ನಗರ ಪ್ರದೇಶದಲ್ಲಿ ಶೇ.80 ಜನರು ನಿರುದ್ಯೋಗಿಗಳಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಈ ಕ್ಷೇತ್ರಕ್ಕೆ ನೆರವು ನೀಡುವುದು ಅನಿವಾರ್ಯವಾಗಿದೆ. ಕೈಗಾರಿಕೆ ಅದರಲ್ಲೂ ಮುಖ್ಯವಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಭಾರಿ ಉತ್ತೇಜನ ದೊರೆಯುವ ನಿರೀಕ್ಷೆಯಿದೆ ಅಂದಾಜು 3 ಲಕ್ಷ ಕೋಟಿ ರೂ. ಕೈಗಾರಿಕೆ ಕ್ಷೇತ್ರಕ್ಕೆ ಮೀಸಲಾಗಿರಲಿದೆ ಎಂದು ಹೇಳಲಾಗಿದೆ.

    ಜಗತ್ತಿನ ಅತಿ ದುಬಾರಿ ಲಸಿಕೆಯಾಗಲಿದೆಯೇ ಕರೊನಾ ಔಷಧ ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts