ನವದೆಹಲಿ: ದೇಶದಲ್ಲಿ ನಿನ್ನೆಯಿಂದ ಅನ್ಲಾಕ್-5 ಪ್ರಾರಂಭವಾಗಿದೆ. ಆದರೆ ಕರೊನಾ ಸೋಂಕಿತರ ಸಂಖ್ಯೆಯಲ್ಲೂ ಏರಿಕೆಯಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಒಂದು ಎಚ್ಚರಿಕೆಯನ್ನು ನೀಡಿದ್ದಾರೆ.
ಕೊವಿಡ್-19 ನಿಯಂತ್ರಣಾ ಸಲಹೆಗಳನ್ನು, ಮಾರ್ಗದರ್ಶಿಯನ್ನು ಪಾಲನೆ ಮಾಡುವಲ್ಲಿ ನಿಷ್ಕಾಳಜಿ, ನಿರ್ಲಕ್ಷ್ಯ ವಹಿಸಿದರೆ ಕರೊನಾ ವೈರಸ್ ಪ್ರಸರಣ ತಡೆಯುವುದು ಇನ್ನಷ್ಟು ಕಷ್ಟವಾಗಲಿದೆ ಎಂದಿದ್ದಾರೆ. ಹಾಗೇ, ಸೋಂಕು ತಡೆಯಲು ಮಾಸ್ಕ್ ಅತ್ಯಗತ್ಯ ಮತ್ತು ಅತ್ಯುತ್ತಮ ಸಾಧನವಾಗಿದ್ದು, ತಪ್ಪದೆ ಧರಿಸಿ ಎಂದು ಸಲಹೆಯನ್ನೂ ನೀಡಿದ್ದಾರೆ. ಇದನ್ನೂ ಓದಿ: ಸಿಸಿಬಿ ನೋಟಿಸ್ ಬರುತ್ತಿದ್ದಂತೆ ರಾಜ್ಯದ ಮೂವರು ಪ್ರಭಾವಿ ನಾಯಕರಿಗೆ ಅನುಶ್ರೀ ಕರೆ ಮಾಡಿದ್ದರು!
ಹೊರಗಡೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ನಿಯಮ ಪಾಲನೆ ಮಾಡುವುದು, ಕೈ ತೊಳೆಯುವುದು, ಸ್ಯಾನಿಟೈಸರ್ ಬಳಕೆ ಮಾಡುವುದು ಸೇರಿ ಸ್ವಚ್ಛತೆ ಕಾಪಾಡಿಕೊಳ್ಳುವುದು ತೀರ ಅಗತ್ಯ. ಕೊವಿಡ್-19 ಪ್ರಸರಣಾ ಸರಪಳಿಯನ್ನು ಕಡಿತಗೊಳಿಸಲು ನಿಯಮಗಳ ಪಾಲನೆ ಮಾಡುವುದು ತೀರ ಮುಖ್ಯ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಈಗ ದೇಶದಲ್ಲಿ ಅನ್ಲಾಕ್ ಹಂತಗಳು ನಡೆಯುತ್ತಿವೆ. ಆದರೆ ಕೆಲವು ಜನರು ಕೊವಿಡ್-19 ನಿಯಂತ್ರಣ ನಿಯಮಪಾಲನೆ ಬಗ್ಗೆ ತೀರ ಅಸಡ್ಡೆ ತೋರುತ್ತಿದ್ದಾರೆ ಇದು ಒಳ್ಳೆಯದಲ್ಲ. ಹೀಗಾದರೆ ಕರೊನಾ ಸೋಂಕು ತಡೆಗಟ್ಟಲು ಸಾಧ್ಯವೇ ಇಲ್ಲ ಎಂದು ಎಚ್ಚರಿಸಿದ್ದಾರೆ. (ಏಜೆನ್ಸೀಸ್)
ಮಹಿಳೆಯರನ್ನು ಅಗೌರವಿಸಿದವರ ಸರ್ವನಾಶ; ಯುಪಿ ಸಿಎಂ ಯೋಗಿ ಆದಿತ್ಯನಾಥ್ ಎಚ್ಚರಿಕೆ…