ಬಳ್ಳಾರಿ: ನಿಂತಿದ್ದ ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಳ್ಳಾರಿ ನಗರದಲ್ಲಿ ನಡೆದಿದೆ.
ಅಶ್ವಿನಿ (27) ಮೃತ ಯುವತಿ. ನಂದೀಶ್ (28) ಎಂಬುವರು ಗಾಯಗೊಂಡಿದ್ದಾರೆ.
ನಂದೀಶ್ ಮತ್ತು ಅಶ್ವಿನಿ ಬೈಕ್ ಮೇಲೆ ಕುರುಗೋಡು ಬಸವೇಶ್ವರ ದೇವಸ್ಥಾನಕ್ಕೆ ಹೋಗಿದ್ದರು.ವಾಪಸ್ ಬರುವ ವೇಳೆ ರಸ್ತೆ ಪಕ್ಕದಲ್ಲೇ ಬೈಕ್ ನಿಲ್ಲಿಸಲಾಗಿತ್ತು. ಈ ವೇಳೆ ವೇಗವಾಗಿ ಬಂದ ಕಾರು ಬೈಕ್ ಡಿಕ್ಕಿ ಹೊಡೆದಿದೆ. ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಕುರುಗೋಡು ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಗಲಮೇಲೆ ಹೆಬ್ಬಾವು ಹೊತ್ತು ಕುಣಿಸಿದ ಈ ವ್ಯಕ್ತಿ: ಸಾಮಾಜಿಕ ಜಾಲತಾಣದಲ್ಲಿ ಭಯಾನಕ ವಿಡಿಯೋ ವೈರಲ್