More

    ಬಕ್ರೀದ್​ಗಾಗಿ ನೀಡಲಾಗಿರುವ ಸಡಿಲಿಕೆ ಹಿಂಪಡೆಯದಿದ್ದರೆ ಕೋರ್ಟ್​ಗೆ ಹೋಗುತ್ತೇವೆ; ಕೇರಳ ಸರ್ಕಾರಕ್ಕೆ ಐಎಂಎ ಎಚ್ಚರಿಕೆ

    ನವದೆಹಲಿ: ಕೇರಳದಲ್ಲಿ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಭಾರೀ ಏರಿಕೆ ಕಾಣುತ್ತಿದ್ದರೂ ಅದನ್ನು ಲೆಕ್ಕಿಸದೆ, ಬಕ್ರೀದ್ ಆಚರಣೆಗಾಗಿ ಲಾಕ್​ಡೌನ್ ಸಡಿಲಿಕೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಅಸಮಾಧಾನ ವ್ಯಕ್ತಪಡಿಸಿದೆ. ಸಡಿಲಿಕೆಯನ್ನು ಹಿಂಪಡೆಯದೇ ಇದ್ದರೆ ರಾಜ್ಯ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದೆ.

    ದೇಶದಲ್ಲಿ ಕರೊನಾ ಮೂರನೇ ಅಲೆ ಭೀತಿ ಇದೆ. ಹೀಗಿರುವಾಗ ಲಾಕ್​ಡೌನ್ ನಿಯಮಗಳನ್ನು ಸಡಿಲಿಸುವುದು ಸೂಕ್ತವಲ್ಲ. ಕೇರಳ ಬಕ್ರೀದ್ ಆಚರಣೆಗಾಗಿ ಸಡಿಲಿಕೆ ನೀಡಿದೆ. ಒಂದು ವೇಳೆ ಆ ಸಡಿಲಿಕೆಯನ್ನು ತಕ್ಷಣ ಹಿಂಪಡೆಯದೇ ಹೋದರೆ ನಾವು ಸುಪ್ರೀಂ ಕೋರ್ಟ್​ಗೆ ತೆರಳಬೇಕಾಗುತ್ತದೆ ಎಂದು ತಿಳಿಸಲಾಗಿದೆ.

    ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದೆ. ಸಾರ್ವಜನಿಕ ಕಾರ್ಯಕ್ರಮಗಳು ನಡೆಸದಂತೆ ಹಾಗೂ ಜನರು ಗುಂಪುಗೂಡದಂತೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ್ದಾರೆ. ಈಗಾಗಲೇ ಅನೇಕ ರಾಜ್ಯಗಳು ಅನೇಕ ಧಾರ್ಮಿಕ ಯಾತ್ರೆಗಳನ್ನು ರದ್ದು ಮಾಡಿವೆ. ಆದರೆ ಕೇರಳ ಈ ರೀತಿ ಸಡಿಲಿಕೆ ಮಾಡಿರುವುದು ನಮಗೆ ನೋವುಂಟು ಮಾಡಿದೆ ಎಂದು ಐಎಂಎ ಹೇಳಿದೆ.

    ಜಮ್ಮು ಕಾಶ್ಮೀರ, ಉತ್ತರ ಪ್ರದೇಶ, ಉತ್ತರಾಂಚಲ್​ನಂತಹ ಅನೇಕ ರಾಜ್ಯಗಳು ತಮ್ಮ ಸಾಂಪ್ರದಾಯಿಕ ಹಾಗೂ ಜನಪ್ರಿಯ ಧಾರ್ಮಿಕ ಕಾರ್ಯಕ್ರಮಗಳನ್ನು ರಚನಾತ್ಮಕ ಪ್ರಜ್ಞೆಯೊಂದಿಗೆ ರದ್ದು ಮಾಡಿವೆ. ಆದರೆ ವಿದ್ಯಾವಂತರ ರಾಜ್ಯವಾದ ಕೇರಳ ಈ ರೀತಿ ನಿರ್ಧಾರ ತೆಗೆದುಕೊಂಡಿರುವುದ ದುರಾದೃಷ್ಟಕರ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. (ಏಜೆನ್ಸೀಸ್)

    ಓವೈಸಿ ಅಧ್ಯಕ್ಷತೆಯ ಎಐಎಂಐಎಂ ಪಕ್ಷದ ಟ್ವಿಟ್ಟರ್ ಅಕೌಂಟ್ ಹ್ಯಾಕ್! ಎಲಾನ್ ಮಸ್ಕ್ ಖಾತೆಯಾಗಿ ಬದಲು!

    ನನ್ನ ಜತೆ ಸೆಲ್ಫಿ ಬೇಕೆಂದರೆ ನೂರು ರೂಪಾಯಿ ಡೆಪಾಸಿಟ್ ಮಾಡ್ಬೇಕು! ಮಧ್ಯ ಪ್ರದೇಶ ಸಚಿವರ ಹೊಸ ರೂಲ್ಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts