ತಿರುವನಂತಪುರ: ಕೇರಳದ ಕೋಯಿಕ್ಕೋಡಿನ ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ದುರಂತ ಬಳಿಕ ಮೊದಲ 15 ನಿಮಿಷಗಳಲ್ಲಿ ಏನೇನು ನಡೆಯಿತು ಎಂಬ ವಿವರ ಲಭ್ಯವಾಗಿದೆ. ಸಂಜೆ 7.40ರ ಸುಮಾರಿಗೆ ದುಬೈನಿಂದ ಬಂದ ಏರ್ಇಂಡಿಯಾ ಎಕ್ಸ್ಪ್ರೆಸ್ ಬೋಯಿಂಗ್ 737 ವಿಮಾನ ಭಾರಿ ಮಳೆಯಿಂದಾಗಿ ರನ್ವೇನಲ್ಲಿ ಜಾರಿ ಸುಮಾರು 35 ಅಡಿ ಆಳದ ತಗ್ಗಿಗೆ ಬಿದ್ದಿತ್ತು.
ಘಟನೆ ನಡೆದ ಗೇಟ್ ನಂಬರ್ 8ರಲ್ಲಿ ಇದ್ದ ಅಸಿಸ್ಟಂಟ್ ಸಬ್ ಇನ್ಸ್ಪೆಕ್ಟರ್ ಅಜಿತ್ ಸಿಂಗ್ ತಕ್ಷಣ ವಾಕಿಟಾಕಿ ಮೂಲಕ ಸಿಐಎಸ್ಎಫ್ ಕಂಟ್ರೋಲ್ ರೂಮ್ೆ ಮಾಹಿತಿ ನೀಡಿದರು. 7.41ಕ್ಕೆ ಸಿಐಎಸ್ಎಫ್ ಕಂಟ್ರೋಲ್ ರೂಮ್ಂದ ಏರ್ ಟ್ರಾಫಿಕ್ ಕಂಟ್ರೋಲ್ ಮತ್ತು ಸಿಐಎಸ್ಎಫ್ನ ಕ್ವಿಕ್ ರೆಸ್ಪಾನ್ಸ್ ಟೀಮ್ೆ ಮಾಹಿತಿ ರವಾನೆಯಾಯಿತು. 7.42ಕ್ಕೆ ವಿಮಾನ ನಿಲ್ದಾಣದ ಅಗ್ನಿ ಶಾಮಕ ದಳಕ್ಕೆ ಹಾಗೂ ವೈದ್ಯಕೀಯ ತಂಡಕ್ಕೆ ಮಾಹಿತಿ ನೀಡಲಾಯಿತು. ತಕ್ಷಣ ಸ್ಥಳಕ್ಕೆ ದೌಡಾಯಿಸಿ ವಿಮಾನ ನಿಲ್ದಾಣದ ಎಲ್ಲ ರಕ್ಷಣಾ ಸಿಬ್ಬಂದಿ ಪ್ರಯಾಣಿಕರ ರಕ್ಷಣೆಗೆ ಮುಂದಾದರು.
ವಿಮಾನ ಕಾಂಪೌಂಡ್ಗೆ ಗುದ್ದಿದ್ದರಿಂದ ಕಾಕ್ಪಿಟ್ ಭಾಗ ನಜ್ಜುಗುಜ್ಜಾಗಿ ಇಬ್ಬರು ಪೈಲಟ್ ಅಲ್ಲೇ ಸಾವನ್ನಪ್ಪಿದ್ದರು. 35 ಅಡಿ ಕೆಳಕ್ಕೆ ಜಾರಿ ಬಿದ್ದಿದ್ದರಿಂದ ವಿಮಾನ ಎರಡು ಭಾಗವಾಗಿ ತುಂಡಾಗಿತ್ತು. ಮೊದಲ 7 ಸಾಲಿನಲ್ಲಿ ಕೂತಿದ್ದ ಪ್ರಯಾಣಿಕರು ಸಾವನ್ನಪ್ಪಿದ್ದರು. ಘಟನೆ ನಡೆದ ತಕ್ಷಣ ಏರ್ಪೋರ್ಟ್ ಸಮೀಪದ ಜನರೆಲ್ಲ ಗೇಟ್ ನಂಬರ್ 8ರ ಬಳಿ ಜಮಾಯಿಸಿದ್ದರು. ವಿಮಾನದಲ್ಲಿ ನೂರಕ್ಕೂ ಹೆಚ್ಚು ಪ್ರಯಾಣಿಕರಿದ್ದರಿಂದ ತುರ್ತು ರಕ್ಷಣೆಗಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ಸೀಮಿತ ಸಂಖ್ಯೆಯಲ್ಲಿ ಸ್ಥಳೀಯರನ್ನು ಗೇಟ್ನ ಒಳಬಿಟ್ಟು ರಕ್ಷಣಾ ಕಾರ್ಯಾಚರಣೆ ನಡೆಸಿದರು. 2 ರಿಂದ 11 ವರ್ಷದೊಳಗಿನ ಒಟ್ಟು 6 ಮಕ್ಕಳನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ರವಾನಿಸುವಲ್ಲಿ ನೆರವಾದರು.
ಕೋಳಿಕ್ಕೋಡ್ ವಿಮಾನ ದುರಂತ; ಲ್ಯಾಂಡಿಂಗ್ಗೆ ಎರಡು ಬಾರಿ ಯತ್ನಿಸಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ಪೈಲಟ್…!