More

    ಖತಾರ್ ಏರ್​​ವೇಸ್​​ ನಿರ್ಬಂಧಿಸಿ ಟ್ವಿಟ್ಟರ್​​ ಅಭಿಯಾನ: ಕಾರಣವೇನು ಗೊತ್ತಾ?

    ನವದೆಹಲಿ: ಟ್ವಿಟ್ಟರ್​​ನಲ್ಲಿ ಖತಾರ್​ ವಿಮಾನ ಏರಬೇಡಿ ಎಂಬ ಅಭಿಯಾನ ಜೋರಾಗಿದೆ. ಭಾರತೀಯರು ಯಾರೂ ಈ ವಿಮಾನ ಹತ್ತಬೇಡಿ ಎಂಬ ಮನವಿ ಮಾಡಲಾಗುತ್ತಿದೆ. ಅರೆ.. ಏನಿದು..? ಈ ಅಭಿಯಾನ ಏಕೆ ಕೈಗೊಂಡಿದ್ದಾರೆ ಎಂಬುದಕ್ಕೆ ಇಲ್ಲಿದೆ ಉತ್ತರ.

    ಪ್ರವಾದಿ ಮೊಹಮ್ಮದ್​ ಅವರ ವಿರುದ್ಧ ಬಿಜೆಪಿ ಮುಖಂಡರಿಬ್ಬರ ಹೇಳಿಕೆ ಗಲ್ಫ್​​ ದೇಶಗಳ ಮೇಲೆ ಪರಿಣಾಮ ಬೀರಿದ್ದು, ಖತಾರ್​​ ಕೈಗೊಂಡ ನಿರ್ಣಯಗಳ ವಿರುದ್ಧ ಈಗ ಭಾರತೀಯರು ಸೇರಿಗೆ ಸವಾ ಸೇರು ಎಂಬಂತೆ ಈ ಅಭಿಯಾನವನ್ನು ಶುರು ಮಾಡಿದ್ದಾರೆ.

    ಬಿಜೆಪಿ ಮುಖಂಡರಾದ ನೂಪರ್​ ಶರ್ಮಾ ಮತ್ತು ನವೀನ್​ ಕುಮಾರ್​ ಜಿಂದಾಲ್​ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಖತಾರ್​ ತನ್ನ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳ ಮೇಲೆ ನಿಷೇಧ ಹೇರಿತ್ತು. ಇದು ಉಭಯ ರಾಷ್ಟ್ರಗಳ ನಡುವಿನ ಸೌಹಾರ್ದಯುತ ಸಂಬಂಧವನ್ನು ಹಾಳು ಮಾಡುವ ತಂತ್ರವಾಗಿದೆ ಎಂದು ಟ್ವಿಟಿಗರು ಖತಾರ್​ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

    ಇದಕ್ಕೆ ಪ್ರತಿಯಾಗಿ ಕೆಲ ಟ್ವಿಟ್ಟಿಗರು, ಖತಾರ್​ವಿಮಾನಯಾನವನ್ನು ನಿರ್ಬಂಧಿಸಿ ಎಂಬ ಅಭಿಯಾನವನ್ನು ಕೈಗೊಂಡಿದ್ದು, ಇದಕ್ಕೆ ಹಲವರು ಸಾಥ್​ ನೀಡಿದ್ದಾರೆ. ಇನ್ನು ಇದು ಎಲ್ಲಿಗೆ ಹೋಗಿ ತಲುಪಲಿದೆ ಎಂಬುದನ್ನು ಕಾದುನೋಡಬೇಕಿದೆ. (ಏಜೆನ್ಸೀಸ್​)

    ಬಹು ನಿರೀಕ್ಷಿತ “ಕಬ್ಜ” ಚಿತ್ರಕ್ಕೆ ಏಳು ಭಾಷೆಗಳಲ್ಲಿ ಡಬ್ಬಿಂಗ್ ಆರಂಭ

    ವಾರದ ಬಳಿಕ ಸಿಸಿಟಿವಿಯಲ್ಲಿ ಬಯಲಾಯ್ತು ಬಾಲಕನ ಸಾವಿನ ರಹಸ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts