ಖತಾರ್ ಏರ್​​ವೇಸ್​​ ನಿರ್ಬಂಧಿಸಿ ಟ್ವಿಟ್ಟರ್​​ ಅಭಿಯಾನ: ಕಾರಣವೇನು ಗೊತ್ತಾ?

blank

ನವದೆಹಲಿ: ಟ್ವಿಟ್ಟರ್​​ನಲ್ಲಿ ಖತಾರ್​ ವಿಮಾನ ಏರಬೇಡಿ ಎಂಬ ಅಭಿಯಾನ ಜೋರಾಗಿದೆ. ಭಾರತೀಯರು ಯಾರೂ ಈ ವಿಮಾನ ಹತ್ತಬೇಡಿ ಎಂಬ ಮನವಿ ಮಾಡಲಾಗುತ್ತಿದೆ. ಅರೆ.. ಏನಿದು..? ಈ ಅಭಿಯಾನ ಏಕೆ ಕೈಗೊಂಡಿದ್ದಾರೆ ಎಂಬುದಕ್ಕೆ ಇಲ್ಲಿದೆ ಉತ್ತರ.

ಪ್ರವಾದಿ ಮೊಹಮ್ಮದ್​ ಅವರ ವಿರುದ್ಧ ಬಿಜೆಪಿ ಮುಖಂಡರಿಬ್ಬರ ಹೇಳಿಕೆ ಗಲ್ಫ್​​ ದೇಶಗಳ ಮೇಲೆ ಪರಿಣಾಮ ಬೀರಿದ್ದು, ಖತಾರ್​​ ಕೈಗೊಂಡ ನಿರ್ಣಯಗಳ ವಿರುದ್ಧ ಈಗ ಭಾರತೀಯರು ಸೇರಿಗೆ ಸವಾ ಸೇರು ಎಂಬಂತೆ ಈ ಅಭಿಯಾನವನ್ನು ಶುರು ಮಾಡಿದ್ದಾರೆ.

https://twitter.com/Shyam_Vir_Singh/status/1533687002989637632?s=20&t=EdrOk9NghEEitthc5TnA1g

ಬಿಜೆಪಿ ಮುಖಂಡರಾದ ನೂಪರ್​ ಶರ್ಮಾ ಮತ್ತು ನವೀನ್​ ಕುಮಾರ್​ ಜಿಂದಾಲ್​ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಖತಾರ್​ ತನ್ನ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳ ಮೇಲೆ ನಿಷೇಧ ಹೇರಿತ್ತು. ಇದು ಉಭಯ ರಾಷ್ಟ್ರಗಳ ನಡುವಿನ ಸೌಹಾರ್ದಯುತ ಸಂಬಂಧವನ್ನು ಹಾಳು ಮಾಡುವ ತಂತ್ರವಾಗಿದೆ ಎಂದು ಟ್ವಿಟಿಗರು ಖತಾರ್​ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಇದಕ್ಕೆ ಪ್ರತಿಯಾಗಿ ಕೆಲ ಟ್ವಿಟ್ಟಿಗರು, ಖತಾರ್​ವಿಮಾನಯಾನವನ್ನು ನಿರ್ಬಂಧಿಸಿ ಎಂಬ ಅಭಿಯಾನವನ್ನು ಕೈಗೊಂಡಿದ್ದು, ಇದಕ್ಕೆ ಹಲವರು ಸಾಥ್​ ನೀಡಿದ್ದಾರೆ. ಇನ್ನು ಇದು ಎಲ್ಲಿಗೆ ಹೋಗಿ ತಲುಪಲಿದೆ ಎಂಬುದನ್ನು ಕಾದುನೋಡಬೇಕಿದೆ. (ಏಜೆನ್ಸೀಸ್​)

ಬಹು ನಿರೀಕ್ಷಿತ “ಕಬ್ಜ” ಚಿತ್ರಕ್ಕೆ ಏಳು ಭಾಷೆಗಳಲ್ಲಿ ಡಬ್ಬಿಂಗ್ ಆರಂಭ

ವಾರದ ಬಳಿಕ ಸಿಸಿಟಿವಿಯಲ್ಲಿ ಬಯಲಾಯ್ತು ಬಾಲಕನ ಸಾವಿನ ರಹಸ್ಯ!

Share This Article

ನಿಮ್ಮನೆ ಮುದ್ದಿನ ನಾಯಿ ನಿಮ್ಮ ಮುಖವನ್ನು ನೆಕ್ಕುತ್ತದೆಯೇ? ಇರಲಿ ಎಚ್ಚರ.. Dog Licking Human Face

Dog Licking Human Face: ಆಧುನಿಕ ಜೀವನದಲ್ಲಿ ಹೆಚ್ಚಿನ ಜನರು ತಮ್ಮ ಮನೆಯಲ್ಲಿ ನಾಯಿಮರಿಗಳನ್ನು ಮನೆ…

ತಾಮ್ರದ ಉಂಗುರ ಧರಿಸುವುದು ಒಳ್ಳೆಯದಾ? ಕೆಟ್ಟದ್ದಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Copper Ring

Copper Ring : ಅನೇಕ ಜನರು ಬೆರಳುಗಳಿಗೆ ಉಂಗುರಗಳನ್ನು ಧರಿಸುತ್ತಾರೆ. ಕೆಲವರಿಗೆ ಇದು ಫ್ಯಾಶನ್​ ಆಗಿದ್ದಾರೆ,…

145 ಕೆಜಿ ತೂಕ, ಶೇ. 55ರಷ್ಟು ಕೊಬ್ಬು… ಈತನ ತೂಕ ಇಳಿಕೆಯ ಪ್ರಯಾಣವೇ ಎಲ್ಲರಿಗೂ ಸ್ಫೂರ್ತಿ! Weight loss

Weight loss : ತೂಕ ಇಳಿಸಿಕೊಳ್ಳುವುದೆಂದರೆ ಸುಲಭದ ಮಾತಲ್ಲ. ಅದಕ್ಕಾಗಿ ದೃಢಸಂಕಲ್ಪ ಬೇಕು ಮತ್ತು ಇಷ್ಟದ…