ಪಾಂಡವಪುರ: ಪಟ್ಟಣದ 2 ಮತ್ತು 9ನೇ ವಾರ್ಡ್ಗಳಿಗೆ ಉಪಚುನಾವಣೆ ಹಿನ್ನೆಲೆ ನಾಮಪತ್ರ ಸಲ್ಲಿಕೆಯ ಕಡೆಯ ದಿನವಾದ ಶುಕ್ರವಾರ 9 ಉಮೇದುವಾರಿಕೆ ಸೇರಿದಂತೆ ಒಟ್ಟಾರೆ 12 ನಾಮಪತ್ರ ಸಲ್ಲಿಕೆಯಾಗಿವೆ.
2 ಹಾಗೂ 9ನೇ ವಾರ್ಡ್ ಸದಸ್ಯರ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ತೆರವಾಗಿರುವ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಸದ್ಯ ರೈತಸಂಘ ಮತ್ತು ಕಾಂಗ್ರೆಸ್ ಚುನಾವಣಾ ಪೂರ್ವ ಹೊಂದಾಣಿಕೆ ಮಾಡಿಕೊಂಡಿದೆ. ಉಳಿದಂತೆ ಬಿಜೆಪಿ, ಜೆಡಿಎಸ್, ಕೆಆರ್ಎಸ್ ಸೇರಿದಂತೆ ಪಕ್ಷೇತರರು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಶನಿವಾರ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ವಾಪಸ್ ಪಡೆಯಲು ಡಿ.18 ಕಡೆಯ ದಿನವಾಗಿದೆ.
9ನೇ ವಾರ್ಡ್ನಿಂದ ರೈತಸಂಘ, ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಗಳಾಗಿ ಎಸ್.ರಾಜು, ಪಿ.ಸಂತೋಷ್, ಬಿಜೆಪಿಯಿಂದ ಸೋಮಶೇಖರ್, ಜೆಡಿಎಸ್ನಿಂದ ಜ್ಯೋತಿ ಲಕ್ಷ್ಮೀ ನಾಮಪತ್ರ ಸಲ್ಲಿಸಿದ್ದಾರೆ. 2ನೇ ವಾರ್ಡ್ನಿಂದ ಮೈತ್ರಿಕೂಟದ ಅಭ್ಯರ್ಥಿಯಾಗಿ ಆರ್.ರಾಜೇಂದ್ರ, ಜಿ.ಸ್ವಾಮಿ ಬಿಜೆಪಿಯಿಂದ ಮಧು, ಜೆಡಿಎಸ್ನಿಂದ ಗೀತಾ ಹಾಗೂ ಯಶವಂತಕುಮಾರ್, ಕೆಆರ್ಎಸ್ ಪಕ್ಷದಿಂದ ರೂಪಾ ಶಾಂತಿಪ್ರಸಾದ್ ನಾಮಪತ್ರ ಸಲ್ಲಿಸಿದ್ದಾರೆ. ಉಳಿದಂತೆ ಜೆಡಿಎಸ್ನ ಬಿ.ಗೀತಾ, ಜ್ಯೋತಿ ಲಕ್ಷ್ಮೀ ಪಕ್ಷೇತರರಾಗಿಯೂ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾಧಿಕಾರಿಯಾಗಿ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಸಹಾಯಕ ಚುನವಣಾಧಿಕಾರಿ ತೋಟಗಾರಿಕೆ ಸಹಾಯಕ ಅಧಿಕಾರಿ ನಾಮಪತ್ರ ಸ್ವೀಕರಿಸಿದರು.