ಬೆಂಗಳೂರು: ಕರೊನಾ-ಲಾಕ್ಡೌನ್ ಕಾರಣಕ್ಕೆ ಎಷ್ಟೋ ಜನ ಉದ್ಯೋಗ-ಉದ್ಯಮವನ್ನು ಕಳೆದುಕೊಂಡಿದ್ದಾರೆ. ಹೊಸದಾಗಿ ಏನಾದರೂ ಮಾಡೋಣವೆಂದರೂ ಸರಿಯಾದ ಸ್ಥಳಾವಕಾಶ ಸಿಗುತ್ತಿಲ್ಲ. ಸುಲಭದಲ್ಲಿ ಜನ ಸೇರುವ ಸ್ಥಳವೇನಾದರೂ ಸಿಕ್ಕರೆ ಯಾವುದಾದರೂ ವ್ಯಾಪಾರ ಮಾಡಬಹುದು ಎಂಬ ಯೋಚನೆಯಲ್ಲಿ ಇರುವವರಿಗೆ ಇದೊಂದು ಸುವರ್ಣಾವಕಾಶ.
ವ್ಯಾಪಾರದ ಯೋಜನೆ-ಯೋಚನೆಯಲ್ಲಿ ಇರುವವರಿಗೆ ರಾಜ್ಯದ 17 ಜಿಲ್ಲೆಗಳಲ್ಲಿ ಅವಕಾಶಗಳಿವೆ. ಇಂಥದ್ದೊಂದು ಅವಕಾಶವನ್ನು ಕೆಎಸ್ಆರ್ಟಿಸಿ ಒದಗಿಸುತ್ತಿದೆ. ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯ 17 ಜಿಲ್ಲೆಗಳ ಜಿಲ್ಲಾ ಕೇಂದ್ರ, ತಾಲೂಕು ಮತ್ತು ಹೋಬಳಿಗಳ ಬಸ್ ನಿಲ್ದಾಣಗಳಲ್ಲಿ ವಾಣಿಜ್ಯ ವ್ಯವಹಾರಕ್ಕೆ ಪರವಾನಗಿ ಆಧಾರದಲ್ಲಿ ಮಳಿಗೆಗಳು ಲಭ್ಯ ಇರುತ್ತವೆ. ಆಸಕ್ತರು ಮಳಿಗೆಗಳ ಪರವಾನಗಿ ಮೊತ್ತ ಹಾಗೂ ಇತರ ವಿವರಗಳಿಗೆ http://ksrtc.karnataka.gov.in ವೀಕ್ಷಿಸಬಹುದು’ ಎಂದು ಕೆಎಸ್ಆರ್ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.
ವಾಲಿಕೊಂಡಿದೆ ಮೂರಂತಸ್ತಿನ ಕಟ್ಟಡ; ಯಾವ ಕ್ಷಣದಲ್ಲಾದರೂ ಬಿದ್ದೀತು ಎಂಬ ಆತಂಕದಲ್ಲಿ ಸ್ಥಳೀಯರು..
ಎಂ.ಜಿ.ರಸ್ತೆಯಲ್ಲಿ ರಾತ್ರಿ ಕಾಣಿಸಿಕೊಂಡ ಚಿರತೆ, ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಆಯ್ತು ಓಡಾಟ!
ಮದುವೆಯಾಗಿದ್ದರೂ ಇನ್ನೊಬ್ಬರ ಜತೆ ಪ್ರೇಮ: ಮನೆಬಿಟ್ಟು ಬಂದವರ ಪರಿಸ್ಥಿತಿ ಗಂಭೀರ