More

    ಬಿಎಸ್‌ವೈ ಹೊಂದಾಣಿಕೆ ಆಟ ಇದೇ ಕೊನೆ: ಈಶ್ವರಪ್ಪ

    ಶಿವಮೊಗ್ಗ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಹೊಂದಾಣಿಕೆ ರಾಜಕಾರಣ ಇನ್ಮುಂದೆ ನಡೆಯಲ್ಲ. ಅವರು ತಮ್ಮ ಮಕ್ಕಳಿಗಾಗಿ ಹೊಂದಾಣಿಕೆ ಮಾಡಿಕೊಂಡಿದ್ದರು ಎಂಬುದು ಜನರಿಗೆ ಗೊತ್ತಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

    ಬರೀ ಭರವಸೆ ಕೊಡುವುದಷ್ಟೇ ಅವರ ಕೆಲಸ. ನೂರು ಸುಳ್ಳು ಅನುಭವಿಸಿದ್ದಕ್ಕೆ ತಿರುಗಿ ಬಿದ್ದಿದ್ದೇನೆ. ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ಮಾಡಿದ್ದು ಸರಿ ಎಂದು ಶೇ.70 ಜನ ಹೇಳುತ್ತಿದ್ದಾರೆ. ಬೈಂದೂರು ಸೇರಿ ಎಂಟೂ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಪರ ಮತದಾರರ ಒಲವಿದೆ. ನಾನು ಗೆಲ್ಲುವುದು ಶತಸಿದ್ಧ. ಗೆದ್ದ ನಂತರ ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಪುನಃ ಬಿಜೆಪಿಗೆ ಸೇರುತ್ತೇನೆ ಎಂದರು.
    ಚುನಾವಣಾ ಆಯೋಗವು ಏ.19ರಂದು ಚಿಹ್ನೆ ನೀಡಲಿದೆ. ಯಾವ ಚಿಹ್ನೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಮುಂದೆ ನಿರ್ಧರಿಸಲಾಗುವುದು. ಮುಂದಿನ 18 ದಿನ ಮತದಾರರಿಗೆ ಚಿಹ್ನೆಯನ್ನು ಪರಿಚಯಿಸಬೇಕಾಗುತ್ತದೆ. ಕಳೆದ 35 ವರ್ಷ ಬಿಜೆಪಿಯ ಕಮಲ ಚಿಹ್ನೆ ಮೇಲೆ ಚುನಾವಣೆ ಎದುರಿಸಿದ್ದು ಇದೀಗ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಇನ್ನೂ ಬಹಳಷ್ಟು ಜನರಿಗೆ ಈಶ್ವರಪ್ಪ ಎಂದರೆ ಕಮಲದ ಗುರುತು ಎಂದು ಭಾವಿಸಿಕೊಂಡಿದ್ದಾರೆ. ಹಾಗಾಗಿ ನನ್ನ ಚಿಹ್ನೆ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಡುವುದು ಅನಿವಾರ್ಯ ಆಗಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts