ವಿಶಾಖಪಟ್ಟಣ: ಎಲ್ಜಿ ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನಲ್ಲಿ ಉಂಟಾದ ಅನಿಲ ಸೋರಿಕೆಯಿಂದ ಮನೆಯೊಳಗೆ ನೂರಾರು ಮಂದಿ ಪ್ರಜ್ಞಾಶೂನ್ಯರಾಗಿದ್ದರು. ಹಾಗಾಗಿ, ಮನೆಗಳ ಬಾಗಿಲು ಒಡೆದು ಅವರೆಲ್ಲರನ್ನೂ ರಕ್ಷಿಸಬೇಕಾಯಿತು ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಆಂಧ್ರಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಆಂಧ್ರ ಪ್ರದೇಶದ ಡಿಜಿಪಿ ಗೌತಮ್ ಸ್ವಾಂಗ್, ವಿಷಾನಿಲ ಸೇವನೆಯಿಂದ ಇದುರವರೆಗೆ 10 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಇಬ್ಬರು ವಿಷಾನಿಲ ಸೇವಿಸಿ ಪ್ರಜ್ಞಾಹೀನರಾಗಿ ಬಾವಿಯೊಳಗೆ ಬಿದ್ದು ಮೃತಪಟ್ಟಿದ್ದಾಗಿ ಹೇಳಿದ್ದಾರೆ.
ಇದನ್ನೂ ಓದಿ: ವಿಷಾನಿಲ ದುರಂತ ಸಂಭವಿಸಿದ ಬಹುರಾಷ್ಟ್ರೀಯ ಕಂಪನಿ ಎಲ್ಜಿ ಪಾಲಿಮರ್ಸ್ ಕಾರ್ಖಾನೆ ಇತಿಹಾಸ ಗೊತ್ತಾ?
ನಸುಕಿನ ಜಾವ 2.30ರಲ್ಲಿ ವಿಷಾನಿಲ ಸೋರಿಕೆಯಾಯಿತು. ತಕ್ಷಣವೇ ಹೊರಬಂದ ನೂರಾರು ಮಂದಿ ರಸ್ತೆಗಳಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅಲ್ಲದೆ ಇನ್ನೂ ನೂರಾರು ಮಂದಿ ನಿದ್ದೆಯಲ್ಲಿಯೇ ಪ್ರಜ್ಞೆ ಕಳೆದುಕೊಂಡಿದ್ದರು ಎಂದು ತಿಳಿಸಿದ್ದಾರೆ.
VIDEO| ವಿಷಾನಿಲ ಹರಡುತ್ತಿದ್ದಂತೆ ಜನರು ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಸ್ಥಳೀಯ ನಿವಾಸಿ