More

    ಮನೆಗಳ ಬಾಗಿಲು ಒಡೆದು ಪ್ರಜ್ಞಾಶೂನ್ಯರಾಗಿದ್ದ ಸಂತ್ರಸ್ತರ ರಕ್ಷಣೆ

    ವಿಶಾಖಪಟ್ಟಣ: ಎಲ್​ಜಿ ಪಾಲಿಮರ್ಸ್​ ಇಂಡಿಯಾ ಪ್ರೈವೇಟ್​ ಲಿಮಿಟೆಡ್​ನಲ್ಲಿ ಉಂಟಾದ ಅನಿಲ ಸೋರಿಕೆಯಿಂದ ಮನೆಯೊಳಗೆ ನೂರಾರು ಮಂದಿ ಪ್ರಜ್ಞಾಶೂನ್ಯರಾಗಿದ್ದರು. ಹಾಗಾಗಿ, ಮನೆಗಳ ಬಾಗಿಲು ಒಡೆದು ಅವರೆಲ್ಲರನ್ನೂ ರಕ್ಷಿಸಬೇಕಾಯಿತು ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಆಂಧ್ರಪ್ರದೇಶ ಪೊಲೀಸರು ತಿಳಿಸಿದ್ದಾರೆ.

    ಸುದ್ದಿಗಾರರ ಜತೆ ಮಾತನಾಡಿದ ಆಂಧ್ರ ಪ್ರದೇಶದ ಡಿಜಿಪಿ ಗೌತಮ್​ ಸ್ವಾಂಗ್​, ವಿಷಾನಿಲ ಸೇವನೆಯಿಂದ ಇದುರವರೆಗೆ 10 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಇಬ್ಬರು ವಿಷಾನಿಲ ಸೇವಿಸಿ ಪ್ರಜ್ಞಾಹೀನರಾಗಿ ಬಾವಿಯೊಳಗೆ ಬಿದ್ದು ಮೃತಪಟ್ಟಿದ್ದಾಗಿ ಹೇಳಿದ್ದಾರೆ.

    ಇದನ್ನೂ ಓದಿ: ವಿಷಾನಿಲ ದುರಂತ ಸಂಭವಿಸಿದ ಬಹುರಾಷ್ಟ್ರೀಯ ಕಂಪನಿ ಎಲ್​ಜಿ ಪಾಲಿಮರ್ಸ್​ ಕಾರ್ಖಾನೆ ಇತಿಹಾಸ ಗೊತ್ತಾ?

    ನಸುಕಿನ ಜಾವ 2.30ರಲ್ಲಿ ವಿಷಾನಿಲ ಸೋರಿಕೆಯಾಯಿತು. ತಕ್ಷಣವೇ ಹೊರಬಂದ ನೂರಾರು ಮಂದಿ ರಸ್ತೆಗಳಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅಲ್ಲದೆ ಇನ್ನೂ ನೂರಾರು ಮಂದಿ ನಿದ್ದೆಯಲ್ಲಿಯೇ ಪ್ರಜ್ಞೆ ಕಳೆದುಕೊಂಡಿದ್ದರು ಎಂದು ತಿಳಿಸಿದ್ದಾರೆ.

    VIDEO| ವಿಷಾನಿಲ ಹರಡುತ್ತಿದ್ದಂತೆ ಜನರು ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts