More

    ರಾಮಲಿಂಗಾಂಜನೇಯಸ್ವಾಮಿ ದೇವಾಲಯದಲ್ಲಿ ಬ್ರಹ್ಮಕುಂಭಾಭಿಷೇಕ ಮಹೋತ್ಸವ

    ಹೊಳೆನರಸೀಪುರ: ಪಟ್ಟಣದ ರಿವರ್ ಬ್ಯಾಂಕ್ ರಸ್ತೆಯ ಶ್ರೀರಾಮಲಿಂಗಾಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀ ಆಂಜನೇಯಸ್ವಾಮಿ ಹಾಗೂ ನಾಗದೇವರ ಮರು ಪ್ರತಿಷ್ಠೆ, ಬ್ರಹ್ಮಕುಂಭಾಭಿಷೇಕ ಮಹೋತ್ಸವ ಗುರುವಾರ ವೈಭವದಿಂದ ನಡೆಯಿತು.

    ಮಾ.26ರಂದು ಗುರು ಪ್ರಾರ್ಥನೆ, ಗಣಪತಿ ಪೂಜೆ ನೆರವೇರಿತು. 27ರಂದು ಪ್ರತಿಷ್ಠಾಪನಾ ಪೂರ್ವಕ ಪೂಜಾ ಕೈಂಕರ್ಯ ನೆರವೇರಿತು. ಶೃಂಗೇರಿ ಶ್ರೀ ಶಾರದ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ದೇವತಾ ಪ್ರಾರ್ಥನೆ, ಪುಣ್ಯಹವಾಚನ, ಕಲಶಾರಾಧನೆ, ಪೂಜಾ ಮಹೋತ್ಸವ ನಡೆದ ನಂತರ ಮಹಾಮಂಗಳಾರತಿ, ನಿವೇದನಾ ಹಾಗೂ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.

    ಕುರುಹಿನಶೆಟ್ಟಿ ಮಹಿಳಾ ಸಂಘದ ಸದಸ್ಯರು ದೇವರನಾಮ ಹಾಗೂ ಸ್ವಾಮಿಯ ಕೀರ್ತನೆಗಳನ್ನು ಹಾಡಿದರು. ಪಟ್ಟಣದ ಸ್ವರ್ಣ ವಿದಾ ್ಯಸಂಸ್ಥೆ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಎದುರುಮುಖ ಶ್ರೀ ರಾಮಲಿಂಗಾಂಜನೇಯಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಆರ್.ರಮೇಶ್, ಕಾರ್ಯದರ್ಶಿ ಎಚ್.ಟಿ.ನರಸಿಂಹಶೆಟ್ಟಿ, ಕುರುಹಿನಶೆಟ್ಟಿ ಜನಾಂಗ ಕಮಿಟಿ ಅಧ್ಯಕ್ಷ ಎಚ್.ಎಸ್.ಸುದರ್ಶನ್ ಸೇರಿದಂತೆ ಹಲವರು ಪೂಜಾ ಮಹೋತ್ಸವದಲ್ಲಿ ಭಾಗಿಯಾಗಿದ್ದರು.

    ಕಮ್ಮರಡಿಯ ಲಕ್ಷ್ಮೀನಾರಾಯಣ ಸೋಮಯಾಜಿ ನೇತೃತ್ವದಲ್ಲಿ ತೀರ್ಥಹಳ್ಳಿಯ ರಾಘವೇಂದ್ರ ಶರ್ಮ, ನಾಗರಾಜಭಟ್, ಮಧುಕರಹೊಳ್ಳ, ಶಿವಪ್ರಸಾದ್ ಮತ್ತು ದೇವಾಲಯದ ಅರ್ಚಕ ಸುಬ್ರಮಣ್ಯ ಪೂಜಾ ಕೈಂಕರ್ಯ ನೆರವೇರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts