More

    ಮೊಬೈಲ್​​ನಲ್ಲೇ ಕಾಲ ಕಳೆದಿದ್ದಕ್ಕೆ ಅಮ್ಮ ಬೈದ್ರು ಅಂತ ಪ್ರಾಣ ಕಳ್ಕೊಂಡ; 9ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣು

    ಮಂಗಳೂರು: ಇತ್ತೀಚೆಗೆ ಮಕ್ಕಳು ಕೂಡ ಆತ್ಮಹತ್ಯೆಯ ಮೊರೆ ಹೋಗುತ್ತಿರುವುದು ಆತಂಕಕಾರಿ ಸಂಗತಿ. ಇಲ್ಲೊಂದು ಕಡೆ ಬಾಲಕನೊಬ್ಬ ಕ್ಷುಲ್ಲಕ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

    ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನ ಜಗದೀಶ್​-ವಿನಯಾ ದಂಪತಿಯ ಪುತ್ರ, 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಬಾಲಕ. ಯಾವಾಗಲೂ ಮೊಬೈಲ್​​ಫೋನ್​ನಲ್ಲೇ ಕಾಲ ಕಳೆಯುತ್ತಿ ಎಂದು ತಾಯಿ ಬೈದಿದ್ದರಿಂದ ತೀವ್ರ ಬೇಸರಗೊಂಡ ಬಾಲಕ ಸಾವಿನ ಮೊರೆ ಹೋಗಿದ್ದಾನೆ.

    ಅಮ್ಮ ಬೈದ ಬಳಿಕ ರೂಮ್​ಗೆ ಸ್ನಾನಕ್ಕೆ ಹೋಗುವ ರೀತಿಯಲ್ಲಿ ಹೋದ ಬಾಲಕ ಎಷ್ಟು ಹೊತ್ತಾದರೂ ಹೊರಗೆ ಬಂದಿರಲಿಲ್ಲ. ಬಳಿಕ ತಂದೆ ಕಿಟಿಕಿ ಬಾಗಿಲು ಮುರಿದು ಒಳಹೊಕ್ಕು ನೋಡಿದಾಗ ಆತ ಫ್ಯಾನ್​ಗೆ ನೇಣು ಹಾಕಿಕೊಂಡಿರುವುದು ಗಮನಕ್ಕೆ ಬಂದಿತ್ತು.

    ಮಾಂಸ ಮಾರಾಟ ನಿಷೇಧ, ಮಾಂಸಾಹಾರಿ ಹೋಟೆಲ್​ಗಳೂ ಬಂದ್; ಈಗ ಕ್ರೇನ್​ ಕಾರ್ಯಕ್ಕೂ ನಿರ್ಬಂಧ: ಎಲ್ಲಿ, ಏಕೆ, ಯಾವಾಗ?

    ಗಂಡ ಮನೆ ಬಿಟ್ಟು ಹೋಗು ಎಂದಿದ್ದಕ್ಕೆ ಪ್ರಾಣವನ್ನೇ ಬಿಟ್ಟ ಹೆಂಡ್ತಿ; ಮಗ ಪ್ರಯೋಗಕ್ಕೆ ತಂದಿದ್ದ ಕೆಮಿಕಲ್ ಕುಡಿದು ಸತ್ತ ತಾಯಿ

    ಚಿಕಿತ್ಸೆಗೆಂದು ದಾಖಲಾದವಳ ಎರಡೂ ಕಿಡ್ನಿ ಕದ್ರು; ‘ನೀನಿನ್ನು ಇದ್ರೂ ಅಷ್ಟೇ, ಸತ್ರೂ ಅಷ್ಟೇ’ ಅಂತ ಪತ್ನಿ 3 ಮಕ್ಕಳ ಬಿಟ್ಟುಹೋದ ಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts