ಮಂಗಳೂರು: ಇತ್ತೀಚೆಗೆ ಮಕ್ಕಳು ಕೂಡ ಆತ್ಮಹತ್ಯೆಯ ಮೊರೆ ಹೋಗುತ್ತಿರುವುದು ಆತಂಕಕಾರಿ ಸಂಗತಿ. ಇಲ್ಲೊಂದು ಕಡೆ ಬಾಲಕನೊಬ್ಬ ಕ್ಷುಲ್ಲಕ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.
ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನ ಜಗದೀಶ್-ವಿನಯಾ ದಂಪತಿಯ ಪುತ್ರ, 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಬಾಲಕ. ಯಾವಾಗಲೂ ಮೊಬೈಲ್ಫೋನ್ನಲ್ಲೇ ಕಾಲ ಕಳೆಯುತ್ತಿ ಎಂದು ತಾಯಿ ಬೈದಿದ್ದರಿಂದ ತೀವ್ರ ಬೇಸರಗೊಂಡ ಬಾಲಕ ಸಾವಿನ ಮೊರೆ ಹೋಗಿದ್ದಾನೆ.
ಅಮ್ಮ ಬೈದ ಬಳಿಕ ರೂಮ್ಗೆ ಸ್ನಾನಕ್ಕೆ ಹೋಗುವ ರೀತಿಯಲ್ಲಿ ಹೋದ ಬಾಲಕ ಎಷ್ಟು ಹೊತ್ತಾದರೂ ಹೊರಗೆ ಬಂದಿರಲಿಲ್ಲ. ಬಳಿಕ ತಂದೆ ಕಿಟಿಕಿ ಬಾಗಿಲು ಮುರಿದು ಒಳಹೊಕ್ಕು ನೋಡಿದಾಗ ಆತ ಫ್ಯಾನ್ಗೆ ನೇಣು ಹಾಕಿಕೊಂಡಿರುವುದು ಗಮನಕ್ಕೆ ಬಂದಿತ್ತು.
ಮಾಂಸ ಮಾರಾಟ ನಿಷೇಧ, ಮಾಂಸಾಹಾರಿ ಹೋಟೆಲ್ಗಳೂ ಬಂದ್; ಈಗ ಕ್ರೇನ್ ಕಾರ್ಯಕ್ಕೂ ನಿರ್ಬಂಧ: ಎಲ್ಲಿ, ಏಕೆ, ಯಾವಾಗ?