More

    ಮತದಾನ ನಡುವೆ ಮನಗೆದ್ದ ಸರ್ಕಾರಿ ಶಾಲೆ !

    ಉಡುಪಿ: ಚುನಾವಣೆಯ ಅಬ್ಬರದ ನಡುವೆ ಜಿಲ್ಲೆಯ ಶಾಲೆಯೊಂದು ಎಲ್ಲರ ಮನಗೆದ್ದಿದೆ. ಹಿರಿಯಡಕ ಬೊಮ್ಮರಬೆಟ್ಟು ಗ್ರಾ.ಪಂ ಮತಗಟ್ಟೆಯಾಗಿದ್ದ ಕರ್ನಾಟಕ ಪಬ್ಲಿಕ್ ಸ್ಕೂಲ್ ಶಾಲೆಯ ಸೌಂದರ್ಯ ಕಂಡು ಮತದಾರರು ಮತ್ತು ಅಧಿಕಾರಿಗಳು ಬೆರಗಾದರು. ಶಾಲೆಯ ಕೈ ತೋಟ, ಉದ್ಯಾನವನ, ಕಲಾಕೃತಿಗಳ ರಚನೆ ಅತ್ಯಂತ ವಿಶಿಷ್ಟ ಮತ್ತು ಸುಂದರವಾಗಿತ್ತು. ಶಾಲೆ ಸೊಬಗು ವೀಕ್ಷಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಎಸ್ಪಿ ವಿಷ್ಣುವರ್ಧನ್ ಶಾಲೆಯ ಕಲಾ ಶಿಕ್ಷಕ ಮೋಹನ್ ಕಡಬ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಭಾವಚಿತ್ರ ತೆಗೆಸಿಕೊಂಡರು. ಶಾಲೆ ನೋಡಿರದ ಮತದಾರರು ಶಾಲೆಯ ಸೌಂದರ್ಯಕಂಡು ಮಾರು ಹೋದರು. ಈ ಶಾಲೆಯ 50ರ ಸಂಭ್ರಮ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಆಗಮಿಸಿದ್ದರು ಎಂಬುದು ವಿಶೇಷ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts