ಮುಂಬೈ: ವಿದ್ಯಾವಂತ ಕುಟುಂಬದಲ್ಲಿ ದುರಹಂಕಾರ ಹೆಚ್ಚು ಅದಕ್ಕೆ ವಿಚ್ಛೇದನವಾಗುತ್ತದೆ ಎಂದು ಹೇಳಿದ್ದ ಆರ್ಎಸ್ಎಸ್ನ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಬಾಲಿವುಡ್ ನಟಿ ಸೋನಮ್ ಕಪೂರ್ ಮಾತಿನ ತಿರುಗೇಟು ನೀಡಿದ್ದಾರೆ.
“ಯಾರೇ ಆಗಲಿ ವಿವೇಕ ಉಳ್ಳ ಮನುಷ್ಯರು ಈ ರೀತಿ ಮಾತನಾಡುವುದಿಲ್ಲ. ಮೂರ್ಖ ಹೇಳಿಕೆ ನೀಡುತ್ತಿದ್ದಾರೆ.” ಎಂದು ನಟಿ ಸೋನಮ್ ಕಪೂರ್ ತಮ್ಮ ಟ್ವಿಟ್ಟರ್ನಲ್ಲಿ ಹೇಳಿದ್ದಾರೆ. ಮೋಹನ್ ಭಾಗವತ್ ನೀಡಿದ್ದ ಹೇಳಿಕೆಯ ಸುದ್ದಿಯನ್ನು ಶೇರ್ ಮಾಡಿರುವ ಆಕೆ ಅದಕ್ಕೆ ಈ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ನಿನ್ನೆ ಅಹಮದಾಬಾದ್ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕುಟುಂಬದ ಮೌಲ್ಯವನ್ನು ತಿಳಿಸುತ್ತಿದ್ದರು. ಮಹಿಳೆಯರಿಲ್ಲದೆ ಈ ಸಮಾಜವಿಲ್ಲ. ಆದರೆ ನಾವು ಸಮಾಜದ ಬಗ್ಗೆ ಯೋಚಿಸುವುದೇ ಇಲ್ಲ, ಇದರಿಂದ ನಾವು ಉದ್ಧಾರವಾಗುವುದಿಲ್ಲ ಮತ್ತು ಸಮಾಜವೂ ಉದ್ಧಾರವಾಗುವುದಿಲ್ಲ. ಭಾರತದಲ್ಲಿ ಇರಬೇಕೆಂದರೆ ಹಿಂದೂ ಸಮಾಜದ ಹೊರೆತು ಬೇರೆ ಆಯ್ಕೆಯೇ ಇಲ್ಲ, ಹಿಂದೂ ಸಮಾಜದಲ್ಲಿ ಕುಟುಂಬದ ಹೊರೆತು ಬೇರೆ ಆಯ್ಕೆಯೇ ಇಲ್ಲ. ಭಾರತದಲ್ಲಿ ವಿದ್ಯಾವಂತರ ಕುಟುಂಬಗಳಲ್ಲಿ ಅಹಂಕಾರ ಹೆಚ್ಚುತ್ತಿರುವುದರಿಂದಲೇ ವಿಚ್ಛೇದನಗಳು ನಡೆಯುತ್ತಿವೆ.” ಎಂದು ಹೇಳಿದ್ದರು. (ಏಜೆನ್ಸೀಸ್)
Which sane man speaks like this? Regressive foolish statements https://t.co/GJmxnGtNtv
— Sonam K Ahuja (@sonamakapoor) February 16, 2020