More

    ದೋಣಿ ದುರಂತ, ಮೀನುಗಾರರು ಪಾರು

    ಗಂಗೊಳ್ಳಿ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಮಾರಸ್ವಾಮಿಯ ಗಂಗಾಧರೇಶ್ವರ ದೇವಸ್ಥಾನದ ಹತ್ತಿರ ಸಮುದ್ರದಲ್ಲಿ ಬುಧವಾರ ಮಧ್ಯಾಹ್ನ ದೋಣಿ ದುರಂತ ನಡೆದಿದ್ದು, ದೋಣಿಯಲ್ಲಿದ್ದ ಮೀನುಗಾರರು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

    ಗಂಗೊಳ್ಳಿಯ ಗುಡ್ಡೆಕೇರಿ ನಿವಾಸಿ ಶ್ರೀನಿವಾಸ ಖಾರ್ವಿ ಮಾಲೀಕತ್ವದ ಆದಿ ಆಂಜನೇಯ ಹೆಸರಿನ ಟ್ರಾಲ್ ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭ ಸಮುದ್ರದ ಅಲೆಗಳ ರಭಸಕ್ಕೆ ದಿಬ್ಬಕ್ಕೆ ಹೊಡೆದು ಮಗುಚಿ ಬಿದ್ದಿದೆ. ಪರಿಣಾಮ ಶ್ರೀನಿವಾಸ್ ಖಾರ್ವಿ ಕಾಲಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಮ ಖಾರ್ವಿ, ಶಂಕರ ಖಾರ್ವಿ, ಕೃಷ್ಣ ಖಾರ್ವಿ ಮತ್ತು ಕುಂದಾಪುರ ಕೋಡಿ ನಿವಾಸಿ ಸುಭಾಸ್ ಖಾರ್ವಿ ಸಮುದ್ರದಲ್ಲಿ ಈಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts