ನವದೆಹಲಿ: ಅಡುಗೆ ಕೆಲಸ ಮಾಡುವ ಎನ್ ಸುಬ್ಬುಲಕ್ಷ್ಮಿ ಪಿಎಂ ಆವಾಸ್ ಯೋಜನೆಯ ಲಾಭವನ್ನು ಪಡೆದು ಸಂತೋಷದಿಂದ ಬರೆದಿರುವ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಇದರಲ್ಲಿ ಮನೆಯ ಚಿತ್ರಗಳ ಜತೆಗೆ ತಮಗೆ ಬಂದ ಪತ್ರವನ್ನೂ ಹಂಚಿಕೊಂಡಿದ್ದಾರೆ. ಇದು ಅತ್ಯಂತ ಹೃದಯ ಸ್ಪರ್ಶದ ಪತ್ರವಾಗಿದ್ದು, ಅದರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿ ಎಂದು ಉಲ್ಲೇಖಿಸಿದ್ದಾರೆ.
Today I met @crkesavan who shared a very touching letter from N. Subbulakshmi Ji, who works as a cook in his house. Hailing from Madurai, N. Subbulakshmi Ji faced many challenges including financial problems. She successfully applied for home under the PM Awas Yojana. pic.twitter.com/ixSnKKXill
— Narendra Modi (@narendramodi) April 12, 2023
ಈ ಪತ್ರವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ತಮಿಳುನಾಡಿನ ಮಧುರೈ ನಿವಾಸಿ ಸುಬ್ಬುಲಕ್ಷ್ಮಿ ಅವರು ಪ್ರಧಾನಮಂತ್ರಿ ವಸತಿ ಯೋಜನೆಯಡಿ ಮನೆ ಕಟ್ಟಿಸಿದ್ದು ಜೀವನದಲ್ಲಿ ಗೌರವ, ಪ್ರತಿಷ್ಠೆ ತಂದಿದೆ. ‘ಇಂದು ನಾನು ಸಿಆರ್ ಕೇಶವನ್ ಅವರನ್ನು ಭೇಟಿ ಮಾಡಿದ್ದೇನೆ. ಅವರು ತಮ್ಮ ಮನೆಯಲ್ಲಿ ಅಡುಗೆಯವರಾಗಿ ಕೆಲಸ ಮಾಡುವ ಎನ್. ಸುಬ್ಬುಲಕ್ಷ್ಮಿ ಜಿ ಮಧುರೈ ಮೂಲದವರು. ಆರ್ಥಿಕ ಸಮಸ್ಯೆ ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಿದರು. ಅವರು ಪಿಎಂ ಆವಾಸ್ ಯೋಜನೆಯಡಿ ಮನೆಗಾಗಿ ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ್ದಾರೆ. ಸುಬ್ಬುಲಕ್ಷ್ಮಿ ಅವರು ತಮ್ಮ ಕೃತಜ್ಞತೆ ಮತ್ತು ಆಶೀರ್ವಾದವನ್ನು ‘ಮಹಾ ಶಕ್ತಿಯ ಮೂಲ’ ಎಂದು ತಿಳಿಸಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು. ಮತ್ತೊಂದು ಟ್ವೀಟ್ನಲ್ಲಿ, ‘ಇಂತಹ ಆಶೀರ್ವಾದಗಳು ದೊಡ್ಡ ಶಕ್ತಿಯ ಮೂಲವಾಗಿದೆ.
ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ನಟಿ ಮಾಳವಿಕಾ ಅವಿನಾಶ್
ಎನ್. ಸುಬ್ಬುಲಕ್ಷ್ಮಿ ಜಿ ಅವರಂತೆ, ಅಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಿಂದಾಗಿ ಅಸಂಖ್ಯಾತ ಜನರು ತಮ್ಮ ಜೀವನವನ್ನು ಬದಲಾಯಿಸಿದ್ದಾರೆ. ಒಂದು ಮನೆ ಅವರ ಜೀವನದಲ್ಲಿ ಗುಣಾತ್ಮಕ ವ್ಯತ್ಯಾಸವನ್ನು ತಂದಿದೆ. ಈ ಯೋಜನೆಯು ಮಹಿಳಾ ಸಬಲೀಕರಣವನ್ನು ತರುವಲ್ಲಿಯೂ ಮುಂಚೂಣಿಯಲ್ಲಿದೆ.’ ಎಂದಿದ್ದಾರೆ.
ಕ್ರಿಕೆಟ್ ಟೀಮ್ನಲ್ಲಿ ತಮಿಳರಿಲ್ಲ..ಸಿಎಸ್ಕೆ ಬ್ಯಾನ್ ಮಾಡಿ ಎಂದ ಶಾಸಕ!