More

    ಪುದುಚೇರಿ ವಿಧಾನಸಭಾ ಸ್ಪೀಕರ್ ಆಗಿ ಬಿಜೆಪಿ ಶಾಸಕ ಆರ್​.ಸೆಲ್ವಂ ಆಯ್ಕೆ

    ಪುದುಚೇರಿ : ಬಿಜೆಪಿ ಶಾಸಕ ‘ಎಂಬಲಂ’ ಆರ್​.ಸೆಲ್ವಂ ಅವರನ್ನು ಪುದುಚೇರಿ ವಿಧಾನಸಭೆಯ ಸ್ಪೀಕರ್ ಆಗಿ ಇಂದು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ವಿಧಾನಸಭಾ ಕಲಾಪ ಆರಂಭವಾದಂತೆ, ಪ್ರೊಟೆಮ್ ಸ್ಪೀಕರ್​ ಕೆ.ಲಕ್ಷ್ಮೀನಾರಾಯಣನ್ ಅವರು ಸೆಲ್ವಂ ಅವರನ್ನು ಸಭಾಪತಿಯಾಗಿ ಘೋಷಿಸಿದರು.

    ಪುದುಚೇರಿ ಕೇಂದ್ರಾಡಳಿತ ಪ್ರದೇಶದ 21ನೇ ಸ್ಪೀಕರ್ ಆಗಿರುವ ಸೆಲ್ವಂ ಅವರನ್ನು ಮುಖ್ಯಮಂತ್ರಿ ಎನ್​.ರಂಗಸ್ವಾಮಿ ಮತ್ತು ವಿಪಕ್ಷ ನಾಯಕ ಆರ್​.ಶಿವ ಆಸನದೆಡೆಗೆ ಕರೆದೊಯ್ದರು. ಹಿರಿಯ ಶಾಸಕ ಸೆಲ್ವಂ ಅವರು ಮನವೇಲಿ ಕ್ಷೇತ್ರದ ಶಾಸಕರಾಗಿದ್ದಾರೆ. ಸ್ಪೀಕರ್ ಚುನಾವಣೆಗೆ ಬೇರೆ ಯಾರ ನಾಮಪತ್ರವೂ ಸಲ್ಲಿಕೆಯಾಗಿರಲಿಲ್ಲ ಎನ್ನಲಾಗಿದೆ.

    ಇದನ್ನೂ ಓದಿ: ಕೇಂದ್ರ ಸರ್ಕಾರದ ಜವಳಿ ಸಚಿವಾಲಯದಲ್ಲಿ ವಿವಿಧ ಹುದ್ದೆಗಳಿಗೆ ಆಹ್ವಾನ- ಕೆಲವೇ ದಿನಗಳು ಬಾಕಿ

    ಪುದುಚೇರಿಯಲ್ಲಿ ಎಐಎನ್​ಆರ್​ಸಿ ಮತ್ತು ಬಿಜೆಪಿ ಒಕ್ಕೂಟವಾಗಿರುವ ಎನ್​ಡಿಎ ಸರ್ಕಾರವಿದೆ. ಎಐಎನ್​ಆರ್​ಸಿ ನಾಯಕ ಎನ್​​.ರಂಗಸ್ವಾಮಿ ಅವರು ಮೇ 7 ರಂದು ಸಿಎಂ ಆಗಿ ಅಧಿಕಾರ ಸ್ವೀಕರಿಸಿದರೆ, ಉಳಿದ ಮಂತ್ರಿ ಸಂಪುಟದ ರಚನೆ ಇನ್ನೂ ಬಾಕಿ ಇದೆ. (ಏಜೆನ್ಸೀಸ್)

    ಕ್ರೆಡಿಟ್ ಕಾರ್ಡ್ ಹೆಸರಲ್ಲಿ ಜನರಿಗೆ ಟೋಪಿ! ನಕಲಿ ಕಾಲ್ ಸೆಂಟರ್ ಪತ್ತೆ!

    ಅಧಿಕಾರಿಗಳಿಗೆ ಐಷಾರಾಮಿ​ ಕಾರು; ಸರ್ಕಾರದ ಮೇಲೆ ವಿಪಕ್ಷಗಳು ಗರಂ!

    ಮದ್ಯ ಸೇವಿಸಲು ಹಣ ಕೊಡಲಿಲ್ಲ ಎಂದು ಬಡ ಹೆಂಡತಿಯ ಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts