ಬೈಲಹೊಂಗಲ: ದೆಹಲಿಯಲ್ಲಿ ಅ.31ರಂದು ಲೋಕಾರ್ಪಣೆಗೊಳ್ಳಲಿರುವ ಅಮೃತ ವಾಟಿಕಾ ಉದ್ಯಾನಕ್ಕೆ ಅರ್ಪಿಸಲು ಶನಿವಾರ ಮಾಜಿ ಶಾಸಕ ಜಗದೀಶ ಮೆಟಗುಡ್ಡ ಅಮೃತ ಕಲಶ ಬೀಳ್ಕೊಟ್ಟರು.
ಯುವ ಮೋರ್ಚಾ ತಾಲೂಕು ಅಧ್ಯಕ್ಷ ಪ್ರಶಾಂತ ಅಮ್ಮಿನಭಾವಿ, ಒಬಿಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸಂತೋಷ ಹಡಪದ, ಸಾಮಾಜಿಕ ಜಾಲತಾಣ ಸಂಚಾಲಕ ರಘು ಕುಮಚಿ ಅವರನ್ನು ಸತ್ಕರಿಸಿ ದೆಹಲಿಗೆ ಕಳುಹಿಸಿಕೊಡಲಾಯಿತು.
ಗುರು ಮೆಟಗುಡ್ಡ, ಸುನೀಲ ಮರಕುಂಬಿ, ಸುಭಾಷ ತುರಮರಿ, ಲಕ್ಕಪ್ಪ ಕಾರಗಿ, ಬಸವರಾಜ ಗುರುವನ್ನವರ, ಸಚಿನ ಕಡಿ, ವೀರೇಶ ಭೂಷಣ್ಣವರ, ಹರ್ಷಾ ಮೆಟಗುಡ್ಡ, ಶಂಭು ಹೂಲಿ, ಗುರುಪಾದ ಅಂಗಡಿ, ರಾಮನಿಂಗ ಬಳಿಗಾರ, ವಿನಾಯಕ ಕಬ್ಬಲಗಿ, ಸಿ.ಜಿ.ವಿಭೂತಿಮಠ, ಕುಮಾರ ಯಡಳ್ಳಿ, ಮಲ್ಲಪ್ಪ ಹೂಲಿ, ಪವನ ಅಕ್ಕಿ, ಆಕಾಶ ಶಿಂಧೆ, ಮಲ್ಲಪ್ಪ ಬೆಳಗಾವಿ ಇತರರಿದ್ದರು.