More

    ಬಿಜೆಪಿಗೆ ಮನಸಾರೆ ಬೆಂಬಲ ನೀಡಿ

    ಬೆಳಗಾವಿ: ಬದ್ಧತೆ, ನಿಷ್ಠೆಯಿಂದ ದೇಶ ಮುನ್ನಡೆಸುತ್ತಿರುವ ಭಾರತೀಯ ಜನತಾ ಪಕ್ಷಕ್ಕೆ ಮನಸಾರೆ ಬೆಂಬಲ ನೀಡಬೇಕು ಎಂದು ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು. ಬೆಳಗಾವಿಯ ಜ್ಯೋತಿ ಕಾಲೇಜ್‌ನ ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳದ ಸದಸ್ಯರು ಹಾಗೂ ಸಿಬ್ಬಂದಿ ಭೇಟಿ ಮಾಡಿ, ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಪರವಾಗಿ ಮತಯಾಚಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮರ್ಥ ಆಡಳಿತದಲ್ಲಿ ದೇಶ ಮುನ್ನಡೆಯುತ್ತಿದ್ದು, ಜಾಗತಿಕವಾಗಿ ಭಾರತ ಪ್ರಕಾಶಿಸುವಂತಾಗಿದೆ ಎಂದರು.

    ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ, ಬೆಳಗಾವಿಯಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದ ಸುರೇಶ ಅಂಗಡಿ ಅವರನ್ನು ಬೆಳಗಾವಿ ಜನತೆ ಎಂದೂ ಮರೆಯದು. ಇದೀಗ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಅವರನ್ನು ಸಂಸದೆಯಾಗಿ ಆಯ್ಕೆ ಮಾಡಬೇಕಿದೆ. ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಡಾ.ಕೋರೆ ಅಭಿಪ್ರಾಯಪಟ್ಟರು.

    ಡಾ.ಸ್ಫೂರ್ತಿ ಅಂಗಡಿ, ಅಶೋಕ ಘೋರ್ಪಡೆ ಹಾಗೂ ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳದ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು. ತಾಲೂಕಿನ ಉಚಗಾವಿ, ಹಿಂಡಲಗಾ, ಯಳ್ಳೂರ (ಕೆಎಲ್‌ಇ ಶತಮಾನೋತ್ಸವ ಆಸ್ಪತ್ರೆ), ದೇಸೂರ, ನಂದಿಹಳ್ಳಿ ಹಾಗೂ ಕುದ್ರೇಮನಿ ಗ್ರಾಮಗಳಿಗೆ ಈಚೆಗೆ ಭೇಟಿ ನೀಡಿ ಮಾತನಾಡಿದ ಡಾ.ಕೋರೆ, ಕೇಂದ್ರ ಸರ್ಕಾರವನ್ನು ಇನ್ನಷ್ಟು ಬಲ ಪಡಿಸಲು ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಮಂಗಲ ಅಂಗಡಿ ಅವರನ್ನು ಗೆಲ್ಲಿಸಬೇಕು ಎಂದರು. ಮೋದಿ ಅವರ ತತ್ತ್ವ-ಸಿದ್ಧಾಂತಗಳ ಮೇಲೆ ಸಾಗಿದ ಸುರೇಶ ಅಂಗಡಿ ಅವರು ಮಹತ್ವದ ಯೋಜನೆ ಜಾರಿಗೆ ತರುವ ಮೂಲಕ ಜಿಲ್ಲೆಗೆ ಅನುಪಮ ಕೊಡುಗೆ ನೀಡಿದ್ದರು. ಅವರ ಕನಸು ಸಾಕಾರಗೊಳಿಸಲು ಪತ್ನಿ ಮಂಗಲ ಅಂಗಡಿ ಅವರಿಗೆ ಎಲ್ಲ ರೀತಿಯ ಬೆಂಬಲ ನೀಡುವ ಮೂಲಕ ಬಹುಮತದಿಂದ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು. ಶಿವಾಜಿ ಶುಂಠಕರ, ಅಶೋಕ ಘೋರ್ಪಡೆ, ಪ್ರಕಾಶ ಮಾನೆ, ರಾಮಚಂದ್ರ ಮನ್ನೋಳ್ಕರ್, ನಾಗೇಶ ಮನ್ನೋಳ್ಕರ್, ರೇಣು ಗೌಡರ, ಮೋಹನ ಅಂಗಡಿ ಸೇರಿ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.

    ಮಂಗಲ ಅಂಗಡಿ ಗೆಲುವಿಗೆ ಮತದಾನ ಮಾಡಿ

    ಕೇಂದ್ರ ಸರ್ಕಾರ ಜನರ ಬಹುದಿನಗಳ ಅನೇಕ ಕನಸನ್ನು ನನಸು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪರವಾದ ನಿಲುವುಗಳು ಭಾರತವನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ ಎಂದು ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಕೋರೆ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts