ನವದೆಹಲಿ: ಬಾಲಿವುಡ್ ನಟಿ ಐಶ್ವರ್ಯಾ ರೈ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ರಾಹುಲ್ ಗಾಂಧಿ ವರ್ತನೆ ಕೆಟ್ಟದ್ದಾಗಿದೆ. ಹಾಗಾಗಿಯೇ ದೇಶದ ಹೆಮ್ಮೆ ಎನಿಸಿರುವ ಐಶ್ವರ್ಯಾ ರೈ ಅವರನ್ನು ಕೀಳಾಗಿ ನೋಡುವ ಮಟ್ಟಕ್ಕೆ ಇಳಿದಿದ್ದಾರೆ ಎಂದು ಟೀಕಿಸಿದೆ.
ಇದನ್ನೂ ಓದಿ: ಬೈಜೂಸ್ ಸಂಸ್ಥಾಪಕ ರವೀಂದ್ರನ್ ಗೆ ಇಡಿ ಲುಕ್ಔಟ್ ನೋಟಿಸ್!
ಯಾವುದೇ ಸಾಧನೆ ಮಾಡದ ರಾಹುಲ್ ಗಾಂಧಿ, ದೇಶಕ್ಕೆ ಕೀರ್ತಿ ತಂದಿರುವ ಐಶ್ವರ್ಯಾ ಅವರ ಮೇಲೆ ಅನುಚಿತ ಕಾಮೆಂಟ್ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ನಿಮ್ಮ ಬಾಸ್, ಆದರೆ ಅವರು ಕನ್ನಡಿಗರನ್ನು(ಕನ್ನಡತಿ ಐಶ್ವರ್ಯಾ ರೈ) ಅವಮಾನಿಸುತ್ತಿದ್ದರೂ ಆ ಕಾಮೆಂಟ್ಗಳಿಗೆ ಏಕೆ ವಿರೋಧಿಸುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದೆ.
ಇದಕ್ಕೆ ನೀವು ಆಕ್ಷೇಪಿಸುತ್ತೀರಾ? ಅಥವಾ ನಿಮ್ಮ ಕುರ್ಚಿಗಾಗಿ ಸುಮ್ಮನಿರುತ್ತೀರಾ..? ಎಂದು ಕರ್ನಾಟಕ ಬಿಜೆಪಿ ಎಕ್ಸ್ (ಟ್ವಿಟ್ಟರ್) ವೇದಿಕೆಯಲ್ಲಿ ಪ್ರಶ್ನಿಸಿದೆ.
ರಾಹುಲ್ ಗಾಂಧಿ ಸದ್ಯ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕಳೆದ ತಿಂಗಳು ಅಯೋಧ್ಯೆಯಲ್ಲಿ ನಡೆದ ರಾಮಮಂದಿರದ ಪ್ರಾಣ ಪ್ರತಿಷ್ಠೆ ಕುರಿತು ಮಾತನಾಡುತ್ತಾ, ‘ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನೋಡಿದ್ದೀರಾ..? ಅಲ್ಲಿ ಒಬಿಸಿ ಸಮುದಾಯಕ್ಕೆ ಸೇರಿದ ಒಬ್ಬರಾದರೂ ನೋಡಿದ್ದೀರಾ..? ಬಿಜೆಪಿಯಲ್ಲಿ ಅಮಿತಾಭ್ ಬಚ್ಚನ್, ಐಶ್ವರ್ಯಾ ರೈ, ನರೇಂದ್ರ ಮೋದಿಯಂತಹವರು ಮಾತ್ರ ಇದ್ದಾರೆ’ ಎಂದು ಟೀಕಿಸಿದ್ದರು.
ಸಮಾರಂಭದಲ್ಲಿ ಕೋಟ್ಯಾಧಿಪತಿಗಳು ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಮಾತ್ರ ಹಾಜರಿದ್ದರು ಎಂದು ಅವರು ಪ್ರತಿಕ್ರಿಯಿಸಿದ್ದರು. ಆದರೆ, ಅಮಿತಾಭ್ ಮತ್ತು ಅಭಿಷೇಕ್ ಬಚ್ಚನ್ ಮಾತ್ರ ಅದ್ಧೂರಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಐಶ್ವರ್ಯಾ ಹಾಜರಿರಲಿಲ್ಲ.
ಈ ಕಾಮೆಂಟ್ಗಳ ಹಿನ್ನಲೆಯಲ್ಲಿ ಬಿಜೆಪಿ ಈ ಹಿಂದೆ ಐಶ್ವರ್ಯಾ ಹೆಸರನ್ನು ಪ್ರಸ್ತಾಪಿಸಿ ರಾಹುಲ್ ಅವರ ಕೆಲವು ಭಾಷಣಗಳನ್ನು ಪೋಸ್ಟ್ ಮಾಡಿದೆ. ‘ಟಿವಿ ಚಾನೆಲ್ಗಳು ಐಶ್ವರ್ಯಾ ಅವರ ನೃತ್ಯವನ್ನು ಮಾತ್ರ ತೋರಿಸುತ್ತವೆ. ಬಡವರ ಸ್ಥಿತಿಗತಿಗಳ ಬಗ್ಗೆ ಯಾವುದೇ ಪ್ರಸಾರ ಮಾಡುತ್ತಿಲ್ಲ ಎಂದು ಭಾಷಣದಲ್ಲಿ ಆರೋಪಿಸಿದ್ದರು. ಈ ಮಾತನ್ನು ಜನಪ್ರಿಯ ಗಾಯಕಿ ಸೋನಾ ಮಹಾಪಾತ್ರ ತೀವ್ರವಾಗಿ ಖಂಡಿಸಿದ್ದರು. ಅವರು ಅದ್ಭುತವಾಗಿ ನೃತ್ಯ ಮಾಡುತ್ತಾರೆ ಮತ್ತು ನಾಯಕರು ತಮ್ಮ ಹಿತಾಸಕ್ತಿಗಳಿಗಾಗಿ ಇತರರನ್ನು ಕೀಳಾಗಿ ಮಾಡುವುದು ಸೂಕ್ತವಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
ಮನಮಿಡಿಯುವಂತಿದೆ ಸಮಂತಾ – ನಾಗ ಚೈತನ್ಯ ವಿಡಿಯೋ… ನಿಮಿಷಗಳಲ್ಲಿ ಲಕ್ಷಾಂತರ ವೀಕ್ಷಣೆ!