ಬೆಂಗಳೂರು: ಕೇಂದ್ರ ಗುಪ್ತಚರ ಇಲಾಖೆಯ ಆಂತರಿಕ ವರದಿ ಇದೀಗ ಕೇಂದ್ರ ಸರ್ಕಾರವನ್ನು ತಲುಪಿಯಾಗಿದೆ. ಮಾತ್ರವಲ್ಲ, ಈ ಇಂಟೆಲಿಜೆನ್ಸ್ ವರದಿಯಿಂದ ಬಿಜೆಪಿ ಹೈಕಮಾಂಡ್ ಬಹಳ ಸಂತೋಷಗೊಂಡಿದೆ ಎಂಬುದಾಗಿ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿರುವ ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆಯವರು ಸಮೀಕ್ಷೆ ನಡೆಸಿದ್ದಾರೆ. ಗುಟ್ಟಾಗಿಯೇ ಮತದಾರರ ಅಭಿಪ್ರಾಯ ಸಂಗ್ರಹಿಸಿರುವ ಇಲಾಖೆ, ಒಟ್ಟಾರೆ ಮೂಡ್ನ ಚಿತ್ರಣವನ್ನೂ ಪಡೆದಿದೆ.
ಇದನ್ನೂ ಓದಿ: ತಂಗಿಗೆ ಮೆಣಸಿನಪುಡಿ ಎರಚಿ ಮಾರಕಾಸ್ತ್ರದಿಂದ ಹೊಡೆದು ಸಾಯಿಸಿದ ಅಣ್ಣ!
ಆರಂಭದಿಂದಲೂ ಉತ್ತಮ ಪರಿಸ್ಥಿತಿ ಇದ್ದರೂ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಪ್ರಚಾರಕ್ಕೆ ಧುಮುಕಿದ ಬಳಿಕ ಎರಡೂ ಕ್ಷೇತ್ರಗಳಲ್ಲಿ ಆನೆಬಲ ಬಂದಂತಾಗಿದೆ. ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಲಾಗಿದ್ದು, ಎರಡೂ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ಖಚಿತ ಎಂದು ಇಂಟೆಲಿಜೆನ್ಸ್ ವರದಿಯಲ್ಲಿ ಉಲ್ಲೇಖಗೊಂಡಿದೆ. ಈ ವರದಿ ಕೇಂದ್ರವನ್ನು ತಲುಪಿದ್ದು, ಬಿಜೆಪಿ ಹೈಕಮಾಂಡ್ ಫುಲ್ ಖುಷ್ ಆಗಿದೆ ಎನ್ನಲಾಗಿದೆ.