More

    ಭಾರತವನ್ನು ಸದೃಢಗೊಳಿಸಿದ ಮೋದಿ

    ಕುಕನೂರು: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಪಕ್ಷ ತಳಮಟ್ಟದಿಂದ ಬಲಿಷ್ಠಗೊಳ್ಳುತ್ತಿದೆ ಎಂದು ಜಿಲ್ಲಾ ಅಧ್ಯಕ್ಷ ನವೀನ್ ಗುಳ್ಳಗಣ್ಣನವರ್ ಹೇಳಿದರು.

    ತಾಲೂಕಿನ ಚಂಡೂರು ಗ್ರಾಮದಲ್ಲಿ ಯಲಬುರ್ಗಾ ಬಿಜೆಪಿ ಮಂಡಲದಿಂದ ನಡೆದ ಗ್ರಾಮ ಚಲೋ ಅಭಿಯಾನದಲ್ಲಿ ಶುಕ್ರವಾರ ಮಾತನಾಡಿದರು.
    ಪ್ರಧಾನಿ ನರೇಂದ್ರ ಮೋದಿ ಹತ್ತು ವರ್ಷದಲ್ಲಿ ಭಾರತವನ್ನು ಸದೃಢಗೊಳಿಸಿದ್ದಾರೆ. ಗ್ರಾಮ ಚಲೋ ಅಭಿಯಾನ ಉದ್ದೇಶ ಗ್ರಾಮೀಣ ಮಟ್ಟದಲ್ಲಿ ಭಾರತವನ್ನು ಉಜ್ವಲಗೊಳಿಸುವುದಾಗಿದೆ. ಪ್ರಧಾನಿ ಮೋದಿ ಆಡಳಿತ ಅವಧಿಯಲ್ಲಿ ಹಲವು ಯೋಜನೆಗಳು ಗ್ರಾಮೀಣರನ್ನು ತಲುಪಿವೆ. ಕಾಂಗ್ರೆಸ್ ಅವಧಿಯಲ್ಲಿ ಬರೀ ಹಗರಣಗಳಾಗಿವೆ. ಶತ್ರು ರಾಷ್ಟ್ರಗಳಿಗಳಿಂದ ದಾಳಿಯಾಗಿವೆ ಆದರೆ, ಮೋದಿ ಆಡಳಿತದಿಂದ ಯಾವ ದೇಶವು ದಾಳಿಗೆ ಮುಂದಾಗಿಲ್ಲ ಎಂದರು.

    ಬಿಜೆಪಿ ಮುಖಂಡ ಬಸಲಿಂಗಪ್ಪ ಭೂತೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ವಿಶ್ವದ ಚುಕ್ಕಾಣಿ ಹಿಡಿಯಬೇಕೆಂದು ವಿದೇಶಿ ರಾಜಕಾರಣಿಗಳು ಅಭಿಲಾಷೆ ವ್ಯಕ್ತಪಡಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಜನ್‌ಧನ್ ಖಾತೆ, ಉಜ್ವಲ ಗ್ಯಾಸ್ ಯೋಜನೆ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿವೆ ಎಂದರು.

    ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ತಾಳಕೇರಿ, ಯಲಬುರ್ಗಾ ಮಂಡಲದ ಯುವ ಮೋರ್ಚಾ ಅಧ್ಯಕ್ಷ ಪ್ರಭುಗೌಡ ಪಾಟೀಲ್, ತಾಪಂ ಮಾಜಿ ಅಧ್ಯಕ್ಷ ಜಗನ್ನಾಥ ಗೌಡ ಪಾಟೀಲ್, ಪ್ರಮುಖರಾದ ಕೊಟ್ರಪ್ಪ ಮುತ್ತಾಳ, ಮಲ್ಲಿಕಾರ್ಜುನ ಹುಲ್ಲೂರು, ಶಿವಶರಣಪ್ಪ ಗೌಡ ಪಾಟೀಲ್, ಗವಿಸಿದ್ದಪ್ಪ ಬ್ಯಾಳಿ, ದತ್ತನಗೌಡ ಮಾಪಾ, ಸುರೇಶ್ ಗೌಡ್ರು ಶಿವನಗೌಡ್ರು, ವೀರಣ್ಣ ಅಂಗಡಿ, ಮುತ್ತಣ್ಣ ಬ್ಯಾಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ತಾಳಕೇರಿ, ಗ್ರಾಪಂ ಅಧ್ಯಕ್ಷ ವಿರೂಪಾಕ್ಷ ತಳಕಲ್, ಸೋಮನಗೌಡ, ರವಿಗೌಡ ಪಾಟೀಲ್, ಪ್ರಕಾಶ್ ಬೋರಣ್ಣನವರ್, ಶಿವಣ್ಣ ಅರಕೇರಿ, ಗ್ರಾಪಂ ಸದಸ್ಯ ವೀರಣ್ಣ ಮಾದಿನೂರು, ವೀರಪ್ಪ ಬಂಡಿ, ಮಜರಪ್ಪ ಗೊರವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts