ಗದಗ:
ಶಿರಹಟ್ಟಿ ಕ್ಷೇತ್ರದ ಮಾಜಿ ಶಾಸಕ ರಾಮಣ್ಣ ಲಮಾಣಿ ಕಾಂಗ್ರೆಸ್ ಸೇರ್ಪಡೆ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಮಿರ್ಕವಾಗಿಯೇ ಮಾತನಾಡಿದ ಮಾಜಿ ಸಚಿವ ಸಿ.ಸಿ. ಪಾಟೀಲ, “ಈ ಹಿಂದಿನ ಲೋಕಸಭಾ ಚುನಾವಣೆಯೊಂದರಲ್ಲಿ ಅಟಲ್ ಜೀ ಮತ್ತು ಅಡ್ವಾಣಿ ಅವರು ಇಬ್ಬರೇ ಗೆಲುವು ಸಾಧಿಸಿದ್ದರು. ಬಿಜೆಪಿ ಫಲಿತಾಂಶದಿಂದ ನೋವಾಗಿ ಅಟಲ್ ಜೀ ಅವರು, ನಡೀರಿ ಫಿಲ್ಮ ನೋಡಿಕೊಂಡು ಬರೋಣ ಎಂದು ಅಡ್ವಾಣಿ ಅವರನ್ನು ಕರೆದುಕೊಂಡು ಹೋಗಿದ್ದರು. ಅಂದು ಅವರು ನೋಡಿದ್ದ ಚಲನಚಿತ್ರದ ಹೆಸರು “ಸೂರಜ್ ಫಿರ್ ನಿಕಲೆಗಾ’….. ಅಂದು ಎರಡೇ ಸ್ಥಾನ ಜಯಸಿದ್ದ ಬಿಜೆಪಿ ಪಕ್ಷ ಇಂದು 300 ಸ್ಥಾನದ ಗಡಿ ದಾಟಿದೆ. ಸೂರ್ಯ ಮತ್ತೇ ಉದಯಿಸುತ್ತಾನೆ. ಕಾಂಗ್ರೆಸ್ ತೆಕ್ಕೆಗೆ ನಮ್ಮ ಪಕ್ಷದವರು ಹೋಗಿದ್ದಾರೆ ಎಂದ ಮಾತ್ರಕ್ಕೆ ಪಕ್ಷ ಕುಗ್ಗಿದಂತಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಾಳಯದಲ್ಲೇ ಸೂರ್ಯ ಉದಯಿಸುತ್ತಾನೆ ಎಂದು ನಗೆ ಬೀರಿದರು.