More

    ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ಮಾಡಿ ಜನ್ಮದಿನಾಚರಣೆ

    ಬೆಂಗಳೂರು: ಜನ್ಮದಿನಾಚರಣೆ ನೆಪದಲ್ಲಿ ಮೋಜು, ಮಸ್ತಿ ಮತ್ತಿತರ ಅರ್ಥಹೀನ ಆಚರಣೆಗಳಿಗೆ ಸಾಕ್ಷಿಯಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಶ್ರೀ ಶಿವಶಂಕರ ಶಾಸ್ತ್ರಿ ಗುರೂಜಿಯವರು ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ಮಾಡುವ ಮೂಲಕ ಅರ್ಥಪೂರ್ಣ ಜನ್ಮದಿನಾಚರಣೆ ಆಚರಿಕೊಂಡಿದ್ದಾರೆ.

    ಗಾನಸುಧೆ ತಂಡದ ಮೂಲಕ ರಾಜ್ಯಾದ್ಯಂತ ಹೆಸರಾಗಿರುವ ನಾದಭಾಸ್ಕರ ಶಿವಶಂಕರ ಶಾಸ್ತ್ರೀಜಿಯವರು, ತಮ್ಮ 51ನೇ ಜನ್ಮದಿನದ ಅಂಗವಾಗಿ ತಾವು ಉಪನ್ಯಾಸಕರಾಗಿರುವ ಚಿಕ್ಕಪೇಟೆ ಮಹಂತರಮಠದ ಶ್ರೀಜಗದ್ಗುರು ರೇಣುಕಾಚಾರ್ಯ ಗುರುಕುಲದ ಎಲ್ಲ ವಿದ್ಯಾರ್ಥಿಗಳಿಗೆ ಶ್ರೀ ಸಿದ್ಧಾಂತ ಶಿಖಾಮಣಿ ಪಾರಾಯಣ ಗ್ರಂಥವನ್ನು ನೀಡಿ ಜ್ಞಾನದಾಸೋಹ ಮಾಡಿದರು. ಇದೇ ವೇಳೆ ಮಠದ ಸ್ವಚ್ಛತಾ ಸಿಬ್ಬಂದಿಗಳಿಗೆ ವಸ್ತ್ರದಾನ ಮಾಡಿ ಸಾಮಾಜಿಕ ಕಳಕಳಿ ಮೆರೆದರು.

    ಶಿವಶಂಕರ ಗುರೂಜಿಯವರು ಅದ್ಭುತ ಗಾಯಕರಾಗಿದ್ದು, ಇತ್ತೀಚೆಗೆ ಸಿಂಗಾಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಸಂಸ್ಕೃತಿ ಸೌರಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.

    ಮಹಂತರ ಮಠದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿದ್ವಾನ್ ಚನ್ನಬಸವಾರಾಧ್ಯರು, ನಿರಂಜನಾರಾಧ್ಯರು, ವೀರಭದ್ರಯ್ಯನವರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ಸದಸ್ಯರಾದ ಕಲ್ಪನಾ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.

    ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ಮಾಡಿ ಜನ್ಮದಿನಾಚರಣೆ

    18ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ!; ನಷ್ಟದಲ್ಲಿದೆ 50 ವರ್ಷಗಳ ಇತಿಹಾಸವಿರುವ ಕಂಪನಿ..

    ಕಾರು ಅಪಘಾತಕ್ಕೆ ದಂಪತಿ ಬಲಿ; ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಮಗನೂ ಇಂದು ಶವವಾಗಿ ಪತ್ತೆ!

    ಹಬ್ಬಕ್ಕೆ ನಾನೇ ಗೌರಿ ತರಬೇಕು ಅಂತ ಸಹೋದರಿಯರ ಗಲಾಟೆ: ತಂಗಿ ತಂದಿದ್ದಕ್ಕೆ ಅಕ್ಕ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts