More

    ನೆಟ್​ವರ್ಕ್ ಸಮಸ್ಯೆಯಿಂದ ನ್ಯಾಯಬೆಲೆ ಅಂಗಡಿಯಾದ ಬಾಸನಕೂಡಿಗೆ ಬಸ್ ತಂಗುದಾಣ

    ಬಣಕಲ್: ನೆಟ್​ವರ್ಕ್ ಸಮಸ್ಯೆಯಿಂದ ನ್ಯಾಯಬೆಲೆ ಅಂಗಡಿಯಲ್ಲಿ ಬಯೊಮೆಟ್ರಿಕ್ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬಾಳೂರು ದರ್ಬಾರ್ ಪೇಟೆ ನ್ಯಾಯಬೆಲೆ ಅಂಗಡಿಯು ಬಸ್ ತಂಗುದಾಣದಲ್ಲೇ ನಡೆಯುತ್ತಿದೆ.

    ಬಾಳೂರು ದರ್ಬಾರ್ ಪೇಟೆಯಲ್ಲಿ ನ್ಯಾಯಬೆಲೆ ಅಂಗಡಿ ಇದ್ದರೂ ನೆಟ್​ವರ್ಕ್ ಸಮಸ್ಯೆಯಿಂದ ಬಯೊಮೆಟ್ರಿಕ್​ನಲ್ಲಿ ಬೆರಳಚ್ಚು ನೀಡಲು ಸಾಧ್ಯವಾಗುತ್ತಿಲ್ಲ. ನ್ಯಾಯಬೆಲೆ ಅಂಗಡಿಯಿಂದ 1 ಕಿಮೀ ದೂರದ ಬಾಸನಕೂಡಿಗೆ ಬಸ್ ತಂಗುದಾಣದಲ್ಲಿ ಬಯೊಮೆಟ್ರಿಕ್​ನಲ್ಲಿ ಬೆರಳಚ್ಚು ನೀಡಿ ಪಡಿತರ ನೀಡಲಾಗುತ್ತಿದೆ.

    ನ್ಯಾಯಬೆಲೆ ಅಂಗಡಿ ಸಿಬ್ಬಂದಿ ಪಡಿತರ ವಿತರಣೆ ಮಾಡುವ ದಿನಗಳಂದು ಲ್ಯಾಪ್​ಟಾಪ್ ಮತ್ತು ಬಯೊಮೆಟ್ರಿಕ್ ಯಂತ್ರವನ್ನು ಬಸ್ ತಂಗುದಾಣದಲ್ಲಿ ಕುಳಿತು ಪಡಿತರದಾರರ ಬೆರಳಚ್ಚು ಪಡೆದು ರೇಷನ್ ಕಾರ್ಡ್​ನಲ್ಲಿ ನಮೂದಿಸಿ ಅಲ್ಲಿಂದ 1 ಕಿಮೀ ದೂರದ ದರ್ಬಾರ್ ಪೇಟೆಯಲ್ಲಿ ಪಡಿತರ ವಿತರಣೆ ಮಾಡಲಾಗುತ್ತಿದೆ.

    ಬಸ್​ತಂಗುದಾಣದಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲದಿರುವುದರಿಂದ ನ್ಯಾಯಬೆಲೆ ಅಂಗಡಿ ಸಿಬ್ಬಂದಿ ಆಗಾಗ ಲ್ಯಾಪ್​ಟಾಪನ್ನು ಬೇರೆಡೆ ಚಾರ್ಜ್ ಮಾಡಿಕೊಂಡು ಬರಬೇಕಾಗಿದೆ. ನೆಟ್​ವರ್ಕ್ ಸಮಸ್ಯೆಯಿಂದ ನ್ಯಾಯಬೆಲೆ ಅಂಗಡಿ ಸಿಬ್ಬಂದಿ ಹಾಗೂ ಪಡಿತರದಾರರು ಪರದಾಡುವಂತಾಗಿದೆ. ಬಾಳೂರು ಗ್ರಾಪಂ ಪ್ರದೇಶದಲ್ಲಿ ನೆಟ್​ವರ್ಕ್ ಸಮರ್ಪಕವಾಗಿ ದೊರೆಯುತ್ತಿದ್ದು ಆ ಭಾಗದಲ್ಲಿ ನ್ಯಾಯಬೆಲೆ ಅಂಗಡಿ ತೆರೆದರೆ ಈ ಸಮಸ್ಯೆಗಳಿಗೆ ತೆರೆ ಎಳೆಯಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts