More

    ಇನ್ನೇನು ಮನೆಗೆ ಹೋಗಬೇಕು ಅನ್ನುವಷ್ಟರಲ್ಲಿ ತಾಯಿ-ಮಗನ ಪ್ರಾಣ ಹೊತ್ತೊಯ್ದ ಜವರಾಯ!

    ಹಾವೇರಿ: ಬೈಕ್​ನಲ್ಲಿ ಮನೆಗೆ ಬರುತ್ತಿದ್ದ ತಾಯಿ-ಮಗ ಇಬ್ಬರೂ ಮಾರ್ಗಮಧ್ಯೆ ದುರಂತ ಅಂತ್ಯಕಂಡಿದ್ದು, ಸಾವಿನಲ್ಲೂ ಒಂದಾದ ಘಟನೆ ಹಾನಗಲ್ ತಾಲೂಕಿನ ಕಾಡಶೆಟ್ಟಿಹಳ್ಳಿ ಬಳಿ ಸಂಭವಿಸಿದೆ.

    ಚನ್ನವ್ವ ಪಂಚಾಕ್ಷರಿ ಕುಂದುರು(42) ಮತ್ತು ಪುತ್ರ ಬಸವರಾಜ್ ಕುಂದುರು(24) ಮೃತರು. ಅಮ್ಮ-ಮಗ ಮಂಗಳವಾರ ಸಂಜೆ ಕಂಚಿನೆಗಳೂರು ಗ್ರಾಮದಿಂದ ಸ್ವಗ್ರಾಮಕ್ಕೆ ಬೈಕ್​ನಲ್ಲಿ ತೆರಳುತ್ತಿದ್ದರು. ಇನ್ನೇನು ಊರು ಸಿಕ್ಕಿತು, ಮನೆಗೆ ಹೋಗಬೇಕು ಎನ್ನುವಷ್ಟರಲ್ಲಿ ಅಲ್ಲಿನ ಕಾಲುವೆ ಬಳಿ ಕಾಯುತ್ತಿದ್ದ ಜವರಾಯ ಇವರಿಬ್ಬರ ಪ್ರಾಣ ಹೊತ್ತೊಯ್ದಿದ್ದಾನೆ.

    ಮಾರ್ಗಮಧ್ಯೆ ಧರ್ಮಾ ಕಾಲುವೆಗೆ ಬೈಕ್ ಸಮೇತ ಬಿದ್ದ ತಾಯಿ-ಮಗ ಅಲ್ಲೇ ಮೃತಪಟ್ಟಿದ್ದು, ಮೃತದೇಹಗಳು ಬುಧವಾರ ಪತ್ತೆಯಾಗಿವೆ. ಕಾಲುವೆ ಬಳಿಯ ತಿರುವನ್ನು ಗಮನಿಸದ ಪರಿಣಾಮ ಬೈಕ್ ಸಮೇತ ಕಾಲುವೆಗೆ ಬಿದ್ದಿದ್ದರು. ಕಾಲುವೆಗೆ ಬಿದ್ದು ನಾಪತ್ತೆಯಾಗಿದ್ದ ಚನ್ನವ್ವ ಮತ್ತು ಬಸವರಾಜ್​ಗಾಗಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

    ತಾಯಿ-ಮಗನ ಶವಗಳನ್ನು ಕಾಲುವೆಯಿಂದ ಹೊರ ತೆಗೆಯುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು. ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಾಯುವ ಮುನ್ನ ಅಪ್ಪನಿಗೆ ಊಟ ಬಡಿಸಿದರು, ಆ ನಂತರ ಅಕ್ಕ-ತಂಗಿ ಇಬ್ಬರೂ ನೇಣಿಗೆ ಶರಣಾದರು!

    ಮದ್ವೆಗೆ 2 ದಿನ ಇದ್ದಂತೆ ವಧುಗೆ ಕೈಕೊಟ್ಟ ವರ​! ಮದ್ವೆ ದಿನ ವಾಪಸ್​ ಬಂದವನಿಂದ ಮತ್ತೊಂದು ಶಾಕ್​

    ಇಡೀ ಲೋಕಕ್ಕೇ ದೊಡ್ಡ ದೇವರಾದ ನಾನೀಗ ಭಿಕಾರಿ! ರಕ್ಷಣೆ ಕೋರಿ ಸಿಎಂಗೆ ಪತ್ರ ಬರೆದ ‘ಅವತಾರ ಪುರುಷ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts