More

    ಬೈಕ್ ಮಧ್ಯೆ ಅಪಘಾತ, ಓರ್ವ ಸಾವು

    ಕೊಕಟನೂರ: ಅಥಣಿ ತಾಲೂಕಿನ ಬುರ್ಲಟ್ಟಿ ಗ್ರಾಮದಿಂದ ಬುರ್ಲಟ್ಟಿ ಕ್ರಾಸ್ ಮಾರ್ಗದ ರಸ್ತೆಯಲ್ಲಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಸವಾರ ಮೃತಪಟ್ಟು, ಮತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ಸಂಭವಿಸಿದೆ.

    ಬುರ್ಲಟ್ಟಿ ಗ್ರಾಮದ ಶಿವಪುತ್ರ ವಿಠ್ಠಲ ಶಿಂಧೆ (30) ಮೃತ ವ್ಯಕ್ತಿ. ಬಳವಾಡ ಗ್ರಾಮದ ಆನಂದ ಮಹಾದೇವ ಹರೋಲಿ (28) ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಶಿವಪುತ್ರ ಹಾಗೂ ಆನಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಶಿವಪುತ್ರ ಮೃತಪಟ್ಟಿದ್ದು, ಗಾಯಾಳು ಆನಂದನನ್ನು ಅಥಣಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

    ಸ್ಥಳಕ್ಕೆ ಐಗಳಿ ಪೊಲೀಸ್ ಠಾಣೆ ಪಿಎಸ್‌ಐ ಶಿವರಾಜ ನಾಯಕವಾಡಿ, ಎಎಸ್‌ಐ ಬಿ.ಎಸ್. ದೇವಮಾನೆ, ತನಿಖಾ ಸಹಾಯಕ ಎ.ಬಿ. ಪಾಟೀಲ, ಇಂದುರಾಜ ರಾಠೋಡ ಭೇಟಿ ನೀಡಿ ಪರಿಶೀಲಿಸಿದರು. ಐಗಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts