ಪಟ್ನಾ: ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಅವರ ಆಧಾರ್ ಕಾರ್ಡ್ಗಳನ್ನು ತಿರುಚಿದ ಆರೋಪದ ಮೇಲೆ ಗುಜರಾತ್ ಪೊಲೀಸರು ಬಿಹಾರದ ಮುಜಾಫರ್ಪುರದಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಿದೆ.
ಮುಜಾಫರ್ಪುರ ಜಿಲ್ಲೆಯ ಸಾದತ್ಪುರ ಪ್ರದೇಶದ ನಿವಾಸಿ ಅರ್ಪಣಾ ದುಬೆ ಅಲಿಯಾಸ್ ಮದನ್ ಕುಮಾರ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಕುಮಾರ್ ಬಂಧಿತ ಆರೋಪಿಯು ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ಆರೋಪಿಯು ಆಧಾರ್ ವೆಬ್ಸೈಟ್ನಲ್ಲಿ ಪ್ರಧಾನಿ ಮೋದಿ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜನುಮದಿನಗಳನ್ನು ಬದಲಾಯಿಸಿ ದುರುಪಯೋಗ ಪಡಿಸಿಕೊಂಡಿದ್ದಾನೆ.
ಇದನ್ನೂ ಓದಿ: ನನ್ನ ಮೂರನೇ ಅವಧಿಯಲ್ಲಿ ಭಾರತ ವಿಶ್ವದ ಅಗ್ರ 3 ಆರ್ಥಿಕ ದೇಶಗಳಲ್ಲಿ ಒಂದಾಗಲಿದೆ: ಪ್ರಧಾನಿ ಮೋದಿ
ಈ ಕುರಿತು ಮೊದಲಿಗೆ ನಮಗೆ ಗುಜರಾತ್ ಪೊಲೀಸರು ಮೊದಲಿಗೆ ನಮಗೆ ಪ್ರಧಾನಿ ಮೋದಿ ಸೇರಿದಂತೆ ಪ್ರಭಾವಿ ನಾಯಕರ ಆಧಾರ್ ಕಾರ್ಡ್ಗಳನ್ನು ವೆಬ್ಸೈಟ್ನಲ್ಲಿ ತಿರುಚಲು ಯತ್ನಿಸಲಾಗುತ್ತಿದೆ ಎಂದು ಕರೆ ಬಂದಿತ್ತು. ಆರೋಪಿಯ ಐಪಿ ಅಡ್ರೆಸ್ ಬಿಹಾರದ ಮುಜಾಫರ್ಪುರದಲ್ಲಿ ತೋರಿಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದರು.
ಆ ನಂತರ ಸ್ಥಳೀಯ ಪೊಲೀಸರ ಸಹಾಯದಿಂದ ಅಧಿಕಾರಿಗಳು ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಗುಜರಾತ್ಗೆ ಕೊಂಡೊಯ್ದಿದ್ದಾರೆ ಎಂದು ಮುಜಾಫರ್ಪುರ ವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.