More

    ಜೋಳ ಬೇಯಿಸಲು ಹೋಗಿ ಸುಟ್ಟು ಕರಕಲಾದ ಪುಟಾಣಿಗಳು!

    ಪಟನಾ: ಪುಟಾಣಿ ಮಕ್ಕಳು ಬೆಂಕಿಯಿಂದ ದೂರವಿರಬೇಕು ಎಂದು ಹೇಳುತ್ತಾರೆ. ಆದರೆ ಅದನ್ನು ಲೆಕ್ಕಿಸದ ಮಕ್ಕಳು, ಗುಡಿಸಲೊಂದರಲ್ಲಿ ಜೋಳ ಬೇಯಿಸಿಕೊಂಡು ತಿನ್ನಲು ಹೋಗಿ ಸಜೀವ ದಹನವಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ಬಿಹಾರದ ಅರಿಯಾ ಪ್ರದೇಶದ ಪಸಾಲಿ ಬ್ಲಾಕ್​ನಲ್ಲಿ ಇಂತಹ ಘಟನೆ ನಡೆದಿದೆ. ಮೂರರಿಂದ ಆರು ವರ್ಷದ ಆರು ಮಕ್ಕಳು ಮಂಗಳವಾರದಂದು ಜೋಳ ಬೇಯಿಸಲು ಮುಂದಾಗಿದ್ದಾರೆ. ಗುಡಿಸಲೊಂದರಲ್ಲಿ ಸೇರಿಕೊಂಡು ಜೋಳ ಬೇಯಿಸಲು ಬೆಂಕಿ ಹಚ್ಚಿದ್ದಾರೆ. ಆ ಬೆಂಕಿ ಗುಡಿಸಲಿಗೂ ತಗುಲಿದ್ದು, ಪೂರ್ತಿ ಗುಡಿಸಲು ಹೊತ್ತಿ ಉರಿದಿದೆ. ಘಟನೆಯಲ್ಲಿ ಆರೂ ಮಕ್ಕಳು ಸಜೀವ ದಹನವಾಗಿದ್ದಾರೆ.

    ಗುಲ್ನಾಜ್ (3), ಬರ್ಕಾಸ್(4), 5 ವರ್ಷದ ಅಶ್ರಫ್, ಅಲಿ ಹಸನ್ ಮತ್ತು ಖುಶಿಹಾರ್ ಹಾಗೂ 6 ವರ್ಷದ ದಿಲ್ವಾರ್​ ಮೃತರಾಗಿರುವ ಮಕ್ಕಳು. ಸದ್ಯ ಬ್ಲಾಕ್​ನಲ್ಲಿ ಸ್ಮಶಾಣ ಮೌನ ಆವರಿಸಿದೆ. ಮಕ್ಕಳನ್ನು ಕಳೆದುಕೊಂಡ ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ. (ಏಜೆನ್ಸೀಸ್​)

    ಸ್ನಾನ ಮಾಡಿ ಸಂತಾನಾಭಿವೃದ್ಧಿಗೆ ಕೂರುತ್ತವೆ ಏಡಿಗಳು! ಅಚ್ಚರಿ ತರಿಸುವ ವಿಚಾರಗಳಿವು..

    ಒಂದು ಗಂಟೆಗಿಂತ ಹೆಚ್ಚು ಕಾಲ ಮಾರ್ಕೆಟ್​ನಲ್ಲಿದ್ದರೆ ಫೈನ್​! ಆದೇಶ ಹೊರಡಿಸಿದ ಜಿಲ್ಲಾಡಳಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts