ಬಿಗ್ ಬಾಸ್ ಮನೆಯ ಸ್ಟ್ರಾಂಗೆಸ್ಟ್ ಸ್ಪರ್ಧಿ ಆಗಿರುವ ತನಿಷಾ, ಇಂದಿಗೆ ತಮ್ಮ ಬಿಗ್ ಬಾಸ್ ಮನೆಯ ಪಯಣವನ್ನು ಮುಗಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಾಹಿನಿಯು ಪ್ರೋಮೋ ಬಿಡುಗಡೆ ಮಾಡಿದ್ದು, ತನಿಷಾ ಕಣ್ಣೀರು ಹಾಕುತ್ತಾ ಇತರ ಸ್ಪರ್ಧಿಗಳ ವಿರುದ್ಧ ಅಸಮಾಧಾನ ಹೊರಹಾಕುತ್ತಿರುವುದನ್ನು ಕಾಣಬಹುದಾಗಿದೆ.
ಸದ್ಯ ತನಿಷಾ ಫ್ಯಾನ್ಸ್ ಬೆಂಕಿ ಹೆಸರಿನಲ್ಲಿ ಆಲ್ಬನ್ ಸಾಂಗ್ ಮಾಡಿರೋದು ಒಂದೆಡೆಯಾದ್ರೆ, ಮತ್ತೊಂದೆಡೆ ನಮ್ರತಾ ಔಟ್ ಆಗ ಬೇಕಿತ್ತೆಂಬ ಕೂಗು ಹೆಚ್ಚಾಗಿ ಕೇಳಿ ಬರುತ್ತಿದೆ. ನಮ್ರತಾ ಮನೆಯಲ್ಲಿರೋಕೆ ಅರ್ಹ ಸ್ಪರ್ಧಿ ಅಲ್ಲ. ಆಕೆ ತನಿಷಾಗೂ ಮೊದಲೇ ಔಟ್ ಆಗಬೇಕಿತ್ತು ಎಂಬ ಕೂಗು ಕೇಳಿಬರುತ್ತಿದೆ.
ನಮ್ರತಾ ಮನೆಯಲ್ಲಿಯೂ ಆಟವಾಡಿಲ್ಲ, ಬೇರೆಯವರ ಸಹಾಯದಿಂದಲೇ ಇಷ್ಟು ದಿನಗಳ ಬಿಗ್ಬಾಸ್ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಆಕೆ ತನ್ನ ಸ್ವಂತ ಆಟವನ್ನ ಆಡೇ ಇಲ್ಲ ಎಂದು ಹೆಚ್ಚಿನ ಕಾಮೆಂಟ್ಸ್ ಆದ್ರೆ, ಇನ್ನೂ ಹಲವರು ತನಿಷಾ ಬಳಿಕ ತುಕಾಲಿ ಸಂತು ಅಥವಾ ವರ್ತೂರ್ ಸಂತೋಷ್ ಔಟ್ ಆಗುತ್ತಾರೆಂದು ಕಾಮೆಂಟ್ಗಳನ್ನ ಮಾಡುತ್ತಿದ್ದಾರೆ.
ತನಿಷಾ ವಿಚಾರದಲ್ಲಿ ಬಿಗ್ ಬಾಸ್ ಸರಿಯಾದ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತನಿಷಾ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. ಫಿನಾಲೆ ಹತ್ತಿರದಲ್ಲೇ ಇದ್ದು ಮುಂದೆ ತನಿಷಾ, ತುಕಾಲಿ ಸಂತೋಷ್ ಅಥವಾ ವರ್ತೂರ್ ಸಂತೋಷ್ ಔಟ್ ಆಗಬಹುದೆಂಬ ಕೂಗು ಹೆಚ್ಚಾಗಿ ಕೇಳಿ ಬರುತ್ತಿದೆ.
ಬಿಗ್ ಬಾಸ್ ಕನ್ನಡ ಸೀಸನ್ 10 ಇದೀಗ 15ನೇ ವಾರದ ಅಂತ್ಯಕ್ಕೆ ತಲುಪಿದ್ದು, ಈ ಮಧ್ಯೆ ಮನೆಯೊಳಗೆ ಎಲಿಮಿನೇಟ್ ಆಗಿ ಹೋದ ಎಲ್ಲಾ ಸ್ಪರ್ಧಿಗಳು ಮರಳಿ ಬಂದಿದ್ದಾರೆ. ಈ ಮೂಲಕ ಫೈನಲ್ ಹಂತವನ್ನು ತಲುಪಿರುವ ಸದಸ್ಯರಿಗೆ ಪ್ರೋತ್ಸಾಹ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಬಿಗ್ ಬಾಸ್ ವಿಜೇತರಿಗೆ ಸಿಗಬೇಕಾದ 50 ಲಕ್ಷ ರೂ. ಹಣವನ್ನು ಪೂರ್ಣಗೊಳಿಸಲು ಒಂದೊಂದೇ ಕ್ಯಾಪ್ಟನ್ ಟಾಸ್ಕ್ಗಳನ್ನು ಕೊಟ್ಟಿದ್ದಾರೆ.
ಒಟ್ಟಾರೆಯಾಗಿ ಇದೀಗ ಮನೆಯಿಂದ ಈ ವಾರ ಯಾರು ಹೊರ ಬರುತ್ತಾರೆ ಅನ್ನೋ ಚರ್ಚೆ ಮತ್ತೆ ಶುರುವಾಗಿದ್ದು, ಹಲವಾರ ಪ್ರಬಲ ಸ್ಪರ್ಧಿಗಳ ಹೆಸರುಗಲೇ ಕೇಳಿ ಬರುತ್ತಿದೆ.