More

    ತನಿಷಾ ನಂತರ ನಮ್ರತಾ ಔಟ್​ ಎಂದು ಸೋಷಿಯಲ್​​ ಮೀಡಿಯಾ ಕಾಮೆಂಟ್ಸ್​​​​; ಆದ್ರೆ ನಿಜವಾಗಿಯೂ ಔಟ್​​ ಆಗಿರೋರ ಹೆಸರು ಶಾಕಿಂಗ್..​?!

    ಬಿಗ್ ಬಾಸ್ ಮನೆಯ ಸ್ಟ್ರಾಂಗೆಸ್ಟ್ ಸ್ಪರ್ಧಿ ಆಗಿರುವ ತನಿಷಾ, ಇಂದಿಗೆ ತಮ್ಮ ಬಿಗ್ ಬಾಸ್ ಮನೆಯ ಪಯಣವನ್ನು ಮುಗಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಾಹಿನಿಯು ಪ್ರೋಮೋ ಬಿಡುಗಡೆ ಮಾಡಿದ್ದು, ತನಿಷಾ ಕಣ್ಣೀರು ಹಾಕುತ್ತಾ ಇತರ ಸ್ಪರ್ಧಿಗಳ ವಿರುದ್ಧ ಅಸಮಾಧಾನ ಹೊರಹಾಕುತ್ತಿರುವುದನ್ನು ಕಾಣಬಹುದಾಗಿದೆ.

    ಸದ್ಯ ತನಿಷಾ ಫ್ಯಾನ್ಸ್​ ಬೆಂಕಿ ಹೆಸರಿನಲ್ಲಿ ಆಲ್ಬನ್​ ಸಾಂಗ್​ ಮಾಡಿರೋದು ಒಂದೆಡೆಯಾದ್ರೆ, ಮತ್ತೊಂದೆಡೆ ನಮ್ರತಾ ಔಟ್​ ಆಗ ಬೇಕಿತ್ತೆಂಬ ಕೂಗು ಹೆಚ್ಚಾಗಿ ಕೇಳಿ ಬರುತ್ತಿದೆ. ನಮ್ರತಾ ಮನೆಯಲ್ಲಿರೋಕೆ ಅರ್ಹ ಸ್ಪರ್ಧಿ ಅಲ್ಲ. ಆಕೆ ತನಿಷಾಗೂ ಮೊದಲೇ ಔಟ್​​​ ಆಗಬೇಕಿತ್ತು ಎಂಬ ಕೂಗು ಕೇಳಿಬರುತ್ತಿದೆ.

    ನಮ್ರತಾ ಮನೆಯಲ್ಲಿಯೂ ಆಟವಾಡಿಲ್ಲ, ಬೇರೆಯವರ ಸಹಾಯದಿಂದಲೇ ಇಷ್ಟು ದಿನಗಳ ಬಿಗ್​ಬಾಸ್​​ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಆಕೆ ತನ್ನ ಸ್ವಂತ ಆಟವನ್ನ ಆಡೇ ಇಲ್ಲ ಎಂದು ಹೆಚ್ಚಿನ ಕಾಮೆಂಟ್ಸ್​ ಆದ್ರೆ, ಇನ್ನೂ ಹಲವರು ತನಿಷಾ ಬಳಿಕ ತುಕಾಲಿ ಸಂತು ಅಥವಾ ವರ್ತೂರ್​ ಸಂತೋಷ್​ ಔಟ್​ ಆಗುತ್ತಾರೆಂದು ಕಾಮೆಂಟ್​ಗಳನ್ನ ಮಾಡುತ್ತಿದ್ದಾರೆ.

    ತನಿಷಾ ವಿಚಾರದಲ್ಲಿ ಬಿಗ್​​ ಬಾಸ್​ ಸರಿಯಾದ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತನಿಷಾ ಫ್ಯಾನ್ಸ್​ ಕಾಮೆಂಟ್​ ಮಾಡುತ್ತಿದ್ದಾರೆ. ಫಿನಾಲೆ ಹತ್ತಿರದಲ್ಲೇ ಇದ್ದು ಮುಂದೆ ತನಿಷಾ, ತುಕಾಲಿ ಸಂತೋಷ್ ಅಥವಾ ವರ್ತೂರ್​​ ಸಂತೋಷ್​ ಔಟ್​ ಆಗಬಹುದೆಂಬ ಕೂಗು ಹೆಚ್ಚಾಗಿ ಕೇಳಿ ಬರುತ್ತಿದೆ.

    ಬಿಗ್ ಬಾಸ್​ ಕನ್ನಡ ಸೀಸನ್​ 10 ಇದೀಗ 15ನೇ ವಾರದ ಅಂತ್ಯಕ್ಕೆ ತಲುಪಿದ್ದು, ಈ ಮಧ್ಯೆ ಮನೆಯೊಳಗೆ ಎಲಿಮಿನೇಟ್ ಆಗಿ ಹೋದ ಎಲ್ಲಾ ಸ್ಪರ್ಧಿಗಳು ಮರಳಿ ಬಂದಿದ್ದಾರೆ. ಈ ಮೂಲಕ ಫೈನಲ್ ಹಂತವನ್ನು ತಲುಪಿರುವ ಸದಸ್ಯರಿಗೆ ಪ್ರೋತ್ಸಾಹ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಬಿಗ್ ಬಾಸ್​ ವಿಜೇತರಿಗೆ ಸಿಗಬೇಕಾದ 50 ಲಕ್ಷ ರೂ. ಹಣವನ್ನು ಪೂರ್ಣಗೊಳಿಸಲು ಒಂದೊಂದೇ ಕ್ಯಾಪ್ಟನ್ ಟಾಸ್ಕ್​ಗಳನ್ನು ಕೊಟ್ಟಿದ್ದಾರೆ.

    ಒಟ್ಟಾರೆಯಾಗಿ ಇದೀಗ ಮನೆಯಿಂದ ಈ ವಾರ ಯಾರು ಹೊರ ಬರುತ್ತಾರೆ ಅನ್ನೋ ಚರ್ಚೆ ಮತ್ತೆ ಶುರುವಾಗಿದ್ದು, ಹಲವಾರ ಪ್ರಬಲ ಸ್ಪರ್ಧಿಗಳ ಹೆಸರುಗಲೇ ಕೇಳಿ ಬರುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts