More

    ಪ್ರಶಾಂತ್​ ಸಂಬರಗಿ ಹೀಗ್ಯಾಕಾದ್ರೂ? ಮಹತ್ವದ ಬದಲಾವಣೆಯನ್ನು ಕಂಡುಹಿಡಿದ ನೆಟ್ಟಿಗರು!

    ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಅವರು ಬಿಗ್​ಬಾಸ್​ಗೆ ಸ್ಪರ್ಧಿಯಾಗಿ ಬಂದಾಗ ಬಿಗ್​ ಮನೆಯಲ್ಲಿ ವಿವಾದಗಳ ಬಿರುಗಾಳಿಯೇ ಏಳಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಅದರಂತೆಯೇ ಮೊದಲ ಇನ್ನಿಂಗ್ಸ್​ನಲ್ಲಿ ಸಂಬರಗಿ ಅನೇಕ ಸ್ಪರ್ಧಿಗಳ ಜತೆಯಲ್ಲಿ ಕಿತ್ತಾಡುವ ಮೂಲಕ ವಿವಾದವನ್ನು ಸೃಷ್ಟಿಸಿದ್ದರು.

    ಕರೊನಾ ಲಾಕ್​ಡೌನ್​ನಿಂದ ಬಿಗ್​ಬಾಸ್​ 75 ದಿನಗಳಿಗೆ ಮೊಟಕುಗೊಂಡು ಮತ್ತೆ ಎರಡನೇ ಇನ್ನಿಂಗ್ಸ್​ ಆರಂಭವಾಗಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಅಬ್ಬರಿಸಿದ್ದ ಸಂಬರಗಿ ಎರಡನೇ ಇನ್ನಿಂಗ್ಸ್​ನಲ್ಲಿ ಸಂಪೂರ್ಣ ಬದಲಾವಣೆಯಾಗಿದ್ದಾರೆ. ಅದಂರೆ ಅವರ ಆಟದ ತಂತ್ರಗಾರಿಕೆ ಬದಲಾಗಿದೆ. ಸಂಬರಗಿ ಮಾತ್ರವಲ್ಲ ಇನ್ನು ಕೆಲವು ಸ್ಪರ್ಧಿಗಳ ಆಟದ ಶೈಲಿ ಬದಲಾಗಿದೆ. ಆದರೆ, ಅವರೆಲ್ಲರಿಗಿಂತ ಸಂಬರಗಿ ಕೊಂಚ ವಿಭಿನ್ನವಾಗಿ ನಿಲ್ಲುತ್ತಾರೆ.

    ಎರಡನೇ ಇನ್ನಿಂಗ್ಸ್​ನಲ್ಲಿ ಸಂಬರಗಿ ವಿವಾದಗಳಿಂದ ದೂರ ಉಳಿದಿದ್ದಾರೆ. ಯಾವುದೇ ಮಹಿಳಾ ಸ್ಪರ್ಧಿಗಳ ಜತೆ ಕಿತ್ತಾಡಿಕೊಳ್ಳದೇ ಅಂತರ ಕಾಯ್ದುಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಯಾವಾಗಲೂ ದಿವ್ಯಾ ಉರುಡುಗ ಮತ್ತು ಕೆ.ಪಿ. ಅರವಿಂದ್​ರೊಂದಿಗೆ ಕಿತ್ತಾಡಿಕೊಂಡಿದ್ದರು. ಅಲ್ಲದೆ, ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿಯಾಗಿರುವ ಚಕ್ರವರ್ತಿ ಚಂದ್ರಚೂಡ್​ ಜತೆಯಲ್ಲೂ ಕಿರಿಕ್​ ಮಾಡಿಕೊಂಡಿದ್ದರು. ಆದರೆ, ಇದೀಗ ತುಂಬ ಶಾಂತವಾಗಿದ್ದಾರೆ.

    ಎರಡನೇ ಇನ್ನಿಂಗ್ಸ್​ನಲ್ಲಿ ಸಂಬರಗಿಗಿಂತ ಚಂದ್ರಚೂಡ್​ ವಿವಾದಗಳಿಂದ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಮಹಿಳಾ ಸ್ಪರ್ಧಿಗಳೊಂದಿಗೆ ವಿವಾದಾತ್ಮಕ ಕಿತ್ತಾಟಗಳಿಂದಾಗಿ ಚಂದ್ರಚೂಡ್ ಅವರನ್ನು ಈಗ ಟ್ರೋಲ್ ಮಾಡಲಾಗುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಚಂದ್ರಚೂಡ್, ಸಂಬರಗಿ ಅವರನ್ನು ಕೆರಳಿಸಿ ಇತರ ಸ್ಪರ್ಧಿಗಳೊಂದಿಗೆ ವಾದ ಮಾಡುವಂತೆ ಮಾಡುತ್ತಿದ್ದರು.

    ಸದ್ಯ ಸಂಬರಗಿ ಅವರು ಸುರಕ್ಷಿತ ಆಟವಾಡುತ್ತಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಹಳೆಯ ಎಪಿಸೋಡ್​ಗಳನ್ನು ನೋಡಿ ಸಂಬರಗಿ ಸ್ವಯಂ ಮೌಲ್ಯಮಾಪನ ಮಾಡಿಕೊಂಡಿದ್ದು, ಎಲ್ಲಿ ತಪ್ಪಾಗುತ್ತಿದೆ ಎಂದು ಅರಿತುಕೊಂಡಿದ್ದಾರೆ. ಅವರ ಆಟ ಹೀಗೆ ಮುಂದುವರಿದರೆ, ಐವರು ಫೈನಲಿಸ್ಟ್​ಗಳಲ್ಲಿ ಸಂಬರಗಿ ಸಹ ಒಬ್ಬರಾಗಿರಲಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಇಂದು ಪ್ರಮಾಣ ವಚನ ಸ್ವೀಕರಿಸುವ ಸಚಿವರ ಪಟ್ಟಿ ಬಿಡುಗಡೆ; ಕರ್ನಾಟಕದ ನಾಲ್ವರಿಗೆ ಮಂತ್ರಿಗಿರಿ

    ಕೇಂದ್ರ ಸಚಿವ ಸಂಪುಟ ಪುನರ್​ರಚನೆ: ಇಂದು ಪ್ರಮಾಣವಚನ ಸ್ವೀಕರಿಸುವುದು 43 ಸಚಿವರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts